ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಭೂ ವಿವಾದದಲ್ಲಿ ಚುನಾವಣಾ ಆಯುಕ್ತ ಚಾವ್ಲಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭೂ ವಿವಾದದಲ್ಲಿ ಚುನಾವಣಾ ಆಯುಕ್ತ ಚಾವ್ಲಾ
ಮುಖ್ಯ ಚುನಾವಣಾ ಆಯುಕ್ತ ಎನ್.ಗೋಪಾಲಸ್ವಾಮಿ ಅವರು ಚುನಾವಣಾ ಆಯುಕ್ತ ನವೀನ್ ಚಾವ್ಲಾ ಅವರನ್ನು ಸೇವೆಯಿಂದ ವಜಾಗೊಳಿಸಬೇಕೆಂದು ರಾಷ್ಟ್ರಪತಿ ಪ್ರತಿಭಾ ಪಾಟೀಲ್‌ ಅವರಿಗೆ ಪತ್ರ ಬರೆದು ವಿವಾದಕ್ಕೀಡಾಗಿದ್ದರೆ, ಇದೀಗ ಚಾವ್ಲಾ ಇನ್ನೊಂದು ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

ಜೈಪುರ ಬಳಿ ಭೂಮಿಯನ್ನು ತನ್ನದಾಗಿಸಿಕೊಳ್ಳಲು ಚಾವ್ಲಾ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವರೆಂಬ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಜೈಪುರ ವಿಚಾರಣಾ ನ್ಯಾಯಾಲಯವೊಂದು ಆದೇಶಿಸಿದೆ.

2000ದಲ್ಲಿ ಜೈಪುರದ ಸಂಗನೆರ್ ವಿಮಾನ ನಿಲ್ದಾಣದ ಬಳಿ 6ಎಕರೆ ಭೂಮಿಯನ್ನು ಅದರ ನಿಜವಾದ ಮೌಲ್ಯಕ್ಕಿಂತಲೂ ಕಡಿಮೆ ದರದಲ್ಲಿ ಖರೀದಿಸಲು ಎರಡು ಖಾಸಗಿ ದತ್ತಿಗಳನ್ನು ಚಾವ್ಲಾ ಸೃಷ್ಟಿಸಿದ್ದಾರೆನ್ನಲಾಗಿದೆ.

ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತನಿಖೆ ನಡೆಸಿ ಮಾರ್ಚ್ 16ರಂದು ವರದಿ ಸಲ್ಲಿಸುವಂತೆ ನ್ಯಾಯಾಲಯ ಹೇಳಿದೆ ಎಂದು ವಕೀಲ ಕೈಲಾಸ್‌ನಾಥ್ ಭಟ್ ತಿಳಿಸಿದ್ದಾರೆ.

ಗೋಪಾಲಸ್ವಾಮಿ ಪತ್ರ ಕುರಿತಂತೆ ಕಾನೂನು ಸಚಿವಾಲಯ ತನ್ನ ಅಭಿಪ್ರಾಯವನ್ನು ಸಿದ್ದಪಡಿಸಿದೆಯಾದರು ಲೋಕಸಭೆ ಚುನಾವಣೆ ವೇಳೆಗೆ ಅದನ್ನು ಬಹಿರಂಗ ಪಡಿಸಲಿರುವುದಾಗಿ ತಿಳಿದು ಬಂದಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹೇಳೋದಿದ್ರೆ ನೇರವಾಗಿ ಹೇಳಿ: ಪಾಕಿಗೆ ಭಾರತ ತಾಕೀತು
ರಣರಂಗವಾದ ಉತ್ತರಪ್ರದೇಶ ಅಸೆಂಬ್ಲಿ
ಮುಲಾಯಂ ಪ್ರಕರಣ: ಸಿಬಿಐಗೆ ಸುಪ್ರೀಂಕೋರ್ಟ್ ಮಂಗಳಾರತಿ
ಐಎಸ್‌ಐನಿಂದ ಕಸಬ್ ಹತ್ಯೆಗೆ ದಾವೂದ್‌ಗೆ ಸುಪಾರಿ !
ಅಕ್ರಮ ಸಂಪತ್ತು: ಮುಲಾಯಂಗೆ ಕ್ಲೀನ್ ಚಿಟ್ ?
ಹೊಸ ವೀಡಿಯೋ: ಭಾರತಕ್ಕೆ ಅಲ್ ಖಾಯಿದಾ ಬೆದರಿಕೆ