ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಲೋಕಸಭೆ ಅಧಿವೇಶನ ಆರಂಭ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲೋಕಸಭೆ ಅಧಿವೇಶನ ಆರಂಭ
ಪ್ರಸಕ್ತ ಸಂಸತ್ತಿನ ಅಂತಿಮ ಲೋಕಸಭಾ ಅಧಿವೇಶನ ಗುರುವಾರ ಆರಂಭಗೊಂಡಿದ್ದು, ರಾಷ್ಟ್ರಪತಿ ಪ್ರತಿಭಾ ದೇವಿ ಸಿಂಗ್ ಪಾಟೀಲ್ ಅವರು ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡುತ್ತ ಸರ್ಕಾರದ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ಆಡಳಿತರೂಢ ಸರ್ಕಾರದ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ಸೂಚಿಸಿದ ರಾಷ್ಟ್ರಪತಿ, ರಾಷ್ಟ್ರದಲ್ಲಿ ಶೇ.4.5ರಷ್ಟು ಕೃಷಿ ಅಭಿವೃದ್ದಿ ಸಾಧಸಿದ್ದು, ಉದ್ಯೋಗ ಖಾತ್ರಿ ಯೋಜನೆಯ ವಿಸ್ತರಣೆ, ಗ್ರಾಮೀಣ ಪ್ರದೇಶಗಳ ಅಭಿವೃದ್ದಿಗೆ ಒತ್ತು ನೀಡಲಾಗುವುದು ಎಂದು ಸರ್ಕಾರದ ಪರವಾಗಿ ಭರವಸೆ ನೀಡಿದರು.

ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಅನುಪಸ್ಥಿತಿಯಲ್ಲಿ ಇಂದು ಆರಂಭಗೊಂಡಿರುವ ರಾಷ್ಟ್ರಪತಿಗಳ ಭಾಷಣದ ನಂತರ ಅಧಿವೇಶನದಲ್ಲಿ ಕೋಲಾಹಲ ಸೃಷ್ಟಿಯಾಗುವ ಎಲ್ಲಾ ಲಕ್ಷಣಗಳು ಇವೆ.

ಸಂಸತ್‌ನಲ್ಲಿ ನಾಳೆ ಮಧ್ಯಂತರ ರೈಲ್ವೆ ಬಜೆಟ್ ಮಂಡನೆ, ಫೆ.16 ರಂದು ಸಾಮಾನ್ಯ ಬಜೆಟ್ ಮಂಡನೆ, ಹಾಗೂ ಅಧಿವೇಶನದ್ಲಿ ಒಟ್ಟು 27ವಿವಿಧ ಮಸೂದೆಗಳು ಮಂಡನೆಯಾಗುವ ಸಾಧ್ಯತೆ ಇದೆ.

ಆಡಳಿತಾರೂಢ ಕಾಂಗ್ರೆಸ್ ಮತ್ತು ವಿರೋಧ ಪಕ್ಷ ಬಿಜೆಪಿ ವಾಸ್ತವದಲ್ಲಿ ಈಗಾಗಲೇ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿರುವುದರಿಂದ ಭಯೋತ್ಪಾದನೆ, ನಿರುದ್ಯೋಗ, ಹಣದುಬ್ಬರದಂತಹ ಪ್ರಮುಖ ವಿಷಯಗಳ ಬಗ್ಗೆ ಸಂಸದರ ನಡುವೆ ಕೋಲಾಹಲ ಸೃಷ್ಟಿಸಲಿದೆ. ಅಲ್ಲದೇ ಇದು ಲೋಕಸಭಾ ಸ್ಪೀಕರ್ ಸೋಮನಾಥ್ ಚಟರ್ಜಿ ಅವರಿಗೂ ಕೊನೆಯ ಅಧಿವೇಶನವಾಗಿದ್ದು, ಅವರು ಮೇ ತಿಂಗಳಿನಲ್ಲಿ ಸ್ಪೀಕರ್ ಹುದ್ದೆಯಿಂದ ನಿವೃತ್ತರಾಗಲಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಾಗಿಂಗ್ ನಡೆಸಿದರೆ ಕ್ರಿಮಿನಲ್ ಮೊಕದ್ದಮೆ: ಸುಪ್ರೀಂ
ಪಾಕ್ ಕಸಬ್ ಪ್ರಕರಣ; ಮುಂದುವರಿದ ಗೊಂದಲ
ಕರುಣಾನಿಧಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ
ಲೋಕಸಭೆ ಅಂತಿಮ ಅಧಿವೇಶನಕ್ಕೆ ಕ್ಷಣಗಣನೆ
ಸ್ಪೀಕರ್ ಚಟರ್ಜಿ 'ಕಟ್ಟಾ-ಮೀಟಾ' ನೆನಪು
ರಿಜ್ವಾನ್ ಕೊಲೆ ಪ್ರಕರಣದ ತನಿಖಾಧಿಕಾರಿ ಹತ್ಯೆ