ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಉಗ್ರರ ವಿರುದ್ಧ ಕ್ರಮ ಕೈಗೊಳ್ಳಿ: ರಾಷ್ಟ್ರಪತಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಗ್ರರ ವಿರುದ್ಧ ಕ್ರಮ ಕೈಗೊಳ್ಳಿ: ರಾಷ್ಟ್ರಪತಿ
ಸಂಸತ್ ಜಂಟಿ ಅಧಿವೇಶನದಲ್ಲಿ ಪ್ರತಿಭಾ ಪಾಟೀಲ್ ಭಾಷಣ
ಪಾಕಿಸ್ತಾನ ನೆಲೆಯಿಂದ ಭಯೋತ್ಪಾದನಾ ಕೃತ್ಯಗಳನ್ನು ನಡೆಸುತ್ತಿರುವ ಉಗ್ರಗಾಮಿ ಸಂಘಟನೆಗಳ ವಿರುದ್ಧ ಕಠಿಣ ಹಾಗೂ ವಿಶ್ವಾಸಾರ್ಹ ಕ್ರಮಗಳನ್ನು ಕೈಗೊಳ್ಳುವಂತೆ ನೆರೆ ರಾಷ್ಟ್ರ ಪಾಕಿಸ್ತಾನಕ್ಕೆ ರಾಷ್ಟ್ರಪತಿ ಪ್ರತಿಭಾ ದೇವಿಸಿಂಗ್ ಪಾಟೀಲ್ ಆಗ್ರಹಿಸಿದ್ದಾರೆ.

ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧಗಳು ಸುಧಾರಣೆಯಾಗುತ್ತಿರುವ ಸಂದರ್ಭದಲ್ಲಿ ಪಾಕಿಸ್ತಾನ ನೆಲದಿಂದ ದಾಳಿಗಳು ನಡೆದಿರುವುದು ವಿಷಾದನೀಯ. ಇದರಿಂದ ದ್ವಿಪಕ್ಷೀಯ ಸಂಬಂಧ ಮಾತುಕತೆಗಳ ಪ್ರಕ್ರಿಯೆಗೆ ತೀವ್ರ ಹೊಡೆತ ಬಿದ್ದಿದೆ ಎಂದವರು ಇಂದಿನಿಂದ ಆರಂಭಗೊಂಡ ಸಂಸತ್‌ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತ ಹೇಳಿದರು.

ಮುಂಬೈ ಮೇಲೆ ನಡೆದ ದಾಳಿಯು ಕಳೆದ 2004ರಿಂದ ನಡೆದಿದ್ದ ದ್ವಿಪಕ್ಷೀಯ ಸಂಬಂಧದ ಮಾತುಕತೆಯ ಪ್ರಕ್ರಿಯೆಗಳನ್ನು ನಾಶಗೊಳಿಸಿದೆ ಎಂದು ತಿಳಿಸಿದರು.

ಪಾಕಿಸ್ತಾನದ ಕಡೆಯಿಂದ ಭಾರತದ ಮೇಲೆ ದಾಳಿಗಳು ಮುಂದುವರಿದ ಪಕ್ಷದಲ್ಲಿ ಇಸ್ಲಾಮಾಬಾದ್ ತನ್ನ ವಿಧಿಯುಕ್ತ ಬದ್ದತೆಗಳನ್ನು ಕಡೆಗಣಿಸಿದಂತಾಗುತ್ತದೆ. ತನ್ನ ನೆಲೆಯಲ್ಲಿರುವ ಉಗ್ರರಿಗೆ ಎಲ್ಲವನ್ನು ನಿಯಂತ್ರಿಸುವ ಅವಕಾಶವನ್ನು ಪಾಕಿಸ್ತಾನ ನೀಡಬಾರದು ಹಾಗೂ ಭಾರತದ ಮೇಲೆ ದಾಳಿ ನಡೆಸಲು ಬಿಡಬಾರದು ಎಂದು ಪ್ರತಿಭಾ ಪಾಟೀಲ್ ಆಗ್ರಹಿಸಿದರು.

ಪಾಕಿಸ್ತಾನ ತನ್ನ ಬದ್ದತೆಗಳಿಗೆ ಅನುಗುಣವಾಗಿ ಗೌರವಯುತ ನಿರ್ಧಾರಗಳನ್ನು ಕೈಗೊಳ್ಳಲಿದೆ ಎಂದು ನಾವು ನಿರೀಕ್ಷಿಸುತ್ತೇವೆ ಹಾಗೂ ಉಗ್ರರ ವಿರುದ್ಧ ನಿರ್ಣಯಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.

ಮುಂಬೈ ದಾಳಿಯಲ್ಲದೆ ಕಾಬೂಲ್‌ನ ಭಾರತ ರಾಯಭಾರಿ ಕಚೇರಿ ಮೇಲೆ ನಡೆದ ದಾಳಿ, ದೆಹಲಿ, ಅಹಮದಾಬಾದ್, ಹೈದರಾಬಾದ್, ಜೈಪುರ್, ಬೆಂಗಳೂರು ಹಾಗೂ ಅಸ್ಸಾಂಗಳಲ್ಲಿ ಇತ್ತೀಚೆಗೆ ನಡೆದ ದಾಳಿಗಳ ಹಿಂದಿರುವ ಶಕ್ತಿಗಳ ಕುರಿತು ಮಾತನಾಡಲು ಪದಗಳು ಸಿಗುತ್ತಿಲ್ಲ ಎಂದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನಿತಾರಿ ಹತ್ಯಾಕಾಂಡ: ಪಂಧೇರ್-ಕೋಲಿ ತಪ್ಪಿತಸ್ಥರು
ಭೋಪಾಲ್ ದುರಂತ: ಮಧ್ಯಸ್ಥಿಕೆಗೆ ಯುಎಸ್ ಕೋರ್ಟ್ ನಕಾರ
ಲೋಕಸಭೆ ಅಧಿವೇಶನ ಆರಂಭ
ರಾಗಿಂಗ್ ನಡೆಸಿದರೆ ಕ್ರಿಮಿನಲ್ ಮೊಕದ್ದಮೆ: ಸುಪ್ರೀಂ
ಪಾಕ್ ಕಸಬ್ ಪ್ರಕರಣ; ಮುಂದುವರಿದ ಗೊಂದಲ
ಕರುಣಾನಿಧಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ