ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಪ್ರತಿಭಟನೆ: ಸಿನ್ನಾ-ಮುಂಡಾಗೆ ಲಾಠಿ ಹೊಡೆತ !
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರತಿಭಟನೆ: ಸಿನ್ನಾ-ಮುಂಡಾಗೆ ಲಾಠಿ ಹೊಡೆತ !
ರಾಜಭವನದತ್ತ ತೆರಳುತ್ತಿದ್ದ ಪ್ರತಿಭಟನಾ ಮೆರವಣಿಗೆ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ ಪರಿಣಾಮ ಕೇಂದ್ರದ ಮಾಜಿ ಸಚಿವ ಯಶವಂತ್ ಸಿನ್ನಾ ಹಾಗೂ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಅರ್ಜುನ್ ಮುಂಡಾ ಅವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುರುವಾರ ನಡೆದಿದೆ.

ಪೊಲೀಸ್ ಲಾಠಿ ಪ್ರಹಾರದಲ್ಲಿ ಮಹಿಳೆಯರು ಸೇರಿದಂತೆ ಒಟ್ಟು 20ಮಂದಿ ಗಾಯಗೊಂಡಿದ್ದಾರೆ. ಸಿನ್ನಾ ಅವರ ಕಿವಿಯ ಭಾಗಕ್ಕೆ ಹೊಡೆತ ಬಿದ್ದಿದ್ದು, ಮತ್ತಷ್ಷು ಪೆಟ್ಟು ಬೀಳುವ ಮುನ್ನ ಸಿನ್ನಾ ಅವರ ಮೂರು ಅಂಗರಕ್ಷಕರು ತಡೆಯುವ ಮೂಲಕ ಗಂಭೀರ ಗಾಯದಿಂದ ಪಾರಾಗುವಂತಾಗಿದೆ. ಆದರೂ ಅವರ ತಲೆಗೆ ಗಂಭೀರ ಸ್ವರೂಪದ ಪೆಟ್ಟು ಬಿದ್ದಿರುವುದಾಗಿ ಮೂಲಗಳು ತಿಳಿಸಿವೆ.

ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಖಾಕಿ ಪಡೆ ಅಮಾನವೀಯವಾಗಿ ಲಾಠಿ ಪ್ರಹಾರ ನಡೆಸಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸರು ನಡೆಸಿದ ಈ ಅಮಾನವೀಯ ಕೃತ್ಯದಲ್ಲಿ ಹಲವಾರು ಮುಖಂಡರು ಗಾಯಗೊಂಡಿದ್ದಾರೆ, ಈ ವಿಷಯವನ್ನು ತಾನು ಸಂಸತ್‌ನಲ್ಲಿ ಪ್ರಸ್ತಾಪಿಸುವುದಾಗಿ ಸಿನ್ನಾ ಹೇಳಿದರು.

ಮುಂಡಾ ಅವರ ಬಲಗೈಗೆ ಹೊಡೆತ ಬಿದ್ದಿದ್ದರೆ, ಬಿಜೆಪಿ ಮುಖಂಡ ಸೂರ್ಯ ರಾಯ್ ಅವರ ತಲೆಗೆ ಪೆಟ್ಟು ಬಿದ್ದಿದೆ, ಇದರಲ್ಲಿ ಪೊಲೀಸ್ ಹಾಗೂ ಅಗ್ನಿಶಾಮಕ ದಳದವರು ಸೇರಿದ್ದಾರೆ. ಅವರೆಲ್ಲರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸತ್ಯಂ ಹಗರಣ-ಐಟಿ ಕ್ಷೇತ್ರಕ್ಕೆ ಬಾಧಕವಿಲ್ಲ: ಪ್ರಣಬ್
ಉಗ್ರರ ವಿರುದ್ಧ ಕ್ರಮ ಕೈಗೊಳ್ಳಿ: ರಾಷ್ಟ್ರಪತಿ
ನಿತಾರಿ ಹತ್ಯಾಕಾಂಡ: ಪಂಧೇರ್-ಕೋಲಿ ತಪ್ಪಿತಸ್ಥರು
ಭೋಪಾಲ್ ದುರಂತ: ಮಧ್ಯಸ್ಥಿಕೆಗೆ ಯುಎಸ್ ಕೋರ್ಟ್ ನಕಾರ
ಲೋಕಸಭೆ ಅಧಿವೇಶನ ಆರಂಭ
ರಾಗಿಂಗ್ ನಡೆಸಿದರೆ ಕ್ರಿಮಿನಲ್ ಮೊಕದ್ದಮೆ: ಸುಪ್ರೀಂ