ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಲಾಲು ಮತ್ತೆ 'ಜನಪರ ರೈಲ್ವೆ ಬಜೆಟ್' ಮಂಡನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲಾಲು ಮತ್ತೆ 'ಜನಪರ ರೈಲ್ವೆ ಬಜೆಟ್' ಮಂಡನೆ
ಕರ್ನಾಟಕದ ಮುಂಗೈ ಬೆಲ್ಲ ಸವರಿದ ಲಾಲು....
PTI
ಗುರುವಾರದಿಂದ ಆರಂಭಗೊಂಡ ಸಂಸತ್ ಅಧಿವೇಶನದಲ್ಲಿ ಶುಕ್ರವಾರ ರೈಲ್ವೆ ಸಚಿವ ಲಾಲುಪ್ರಸಾದ್ ಯಾದವ್ ಸತತ 6ನೇ ಬಾರಿಯೂ ಜನಪರ (ಆಮ್ ಆದ್ಮಿ)ವಾದ ಮಧ್ಯಂತರ ರೈಲ್ವೆ ಬಜೆಟ್ ಮಂಡಿಸಿದ್ದಾರೆ.

ರೈಲ್ವೆ ಪ್ರಯಾಣ ದರದಲ್ಲಿ ಹವಾನಿಯಂತ್ರಿತ ಸೇರಿದಂತೆ ಜನರಲ್ ಪ್ರಯಾಣದರದಲ್ಲಿ ಶೇ.2ರಷ್ಟು ಇಳಿಕೆ ಘೋಷಿಸಿದ ಲಾಲೂಪ್ರಸಾದ್ ಪ್ರಸಕ್ತ ಸಾಲಿನಲ್ಲಿ ಕರ್ನಾಟಕಕ್ಕೆ ಮೂರು ನೂತನ ರೈಲು ಮಂಜೂರು ಮಾಡಿದ್ದಾರೆ. ಮೈಸೂರು-ಯಶವಂತಪುರ್ ಎಕ್ಸ್‌ಪ್ರೆಸ್ ರೈಲು, ಬೆಂಗಳೂರು-ನಿಜಾಮುದ್ದೀನ್ ನೂತನ ರೈಲನ್ನು ಲಾಲೂ ಕರ್ನಾಟಕಕ್ಕೆ ದಯಪಾಲಿಸುವ ಮೂಲಕ ಕರ್ನಾಟಕದ ಮುಂಗೈ ಬೆಲ್ಲ ಸವರುವ ಮೂಲಕ ಸಾಕಷ್ಟು ನಿರಾಸೆ ಮೂಡಿಸಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ರೈಲ್ವೆ ಇಲಾಖೆ 90ಸಾವಿರ ಕೋಟಿ ಆದಾಯ ಗಳಿಸಿದ್ದು, ಜನಸಾಮಾನ್ಯರ ಮೇಲೆ ಹೊರೆ ಹೇರದೆ ಇಲಾಖೆ ಲಾಭ ಗಳಿಸಿದೆ. ಅಲ್ಲದೇ ಜನಸಾಮಾನ್ಯರಿಗೆ ಹೊರೆಯಾಗದಂತೆ ಈ ಬಾರಿಯೂ ಯುಪಿಎ ಸರ್ಕಾರ ಜನಪರವಾದ ರೈಲ್ವೆ ಬಜೆಟ್ ಮಂಡಿಸುತ್ತಿರುವಾದಾಗಿ ಅವರು ನುಡಿದರು.

PTI
ಮಧ್ಯಂತರ ರೈಲ್ವೆ ಬಜೆಟ್ ಮುಖ್ಯಾಂಶ:

ರೈಲ್ವೆ ದುರ್ಘಟನೆಗಳ ಸಂಖ್ಯೆ ಇಳಿಮುಖ

ರೈಲ್ವೆ ವಿಚಾರಣೆಗೆ 4ಕಾಲ್ ಸೆಂಟರ್‌ಗಳ ಸ್ಥಾಪನೆ

ಪ್ರಯಾಣಿಕರ ಸಂಚಾರದಲ್ಲಿ ಶೇ.14ರಷ್ಟು ಹೆಚ್ಚಳ

2009-10ರಲ್ಲಿ 10,576 ಕೋಟಿ ಲಾಭದ ನಿರೀಕ್ಷೆ

ರೈಲಿನಲ್ಲಿ ಡಬ್ಬಲ್ ಡೆಕ್ಕರ್ ಸರಕು ಸಾಗಾಣೆ ವ್ಯವಸ್ಥೆಗೆ ಕ್ರಮ

ರೈಲ್ವೆ ಉದ್ಯೋಗಿಗಳಿಗೆ 6ನೇ ವೇತನ ಆಯೋಗದ ಶಿಫಾರಸು ಜಾರಿ

ದೆಹಲಿ-ಅಮೃತ್‌ಸರ್-ಹೌರಾ-ಅಹಮದಾಬಾದ್-ಪುಣೆ-ಚೆನ್ನೈ-ಎರ್ನಾಕುಲಂ ನಡುವೆ ಬುಲೆಟ್ ಟ್ರೈನ್ ವ್ಯವಸ್ಥೆ

ಮುಂದಿನ 5ವರ್ಷಗಳಲ್ಲಿ 2.3ಲಕ್ಷ ಹೂಡಿಕೆ

ಲೂಧಿಯಾನದಿಂದ ಕೋಲ್ಕತಾದವರೆಗೆ ಪೂರ್ವ ಸರಕು ಸಾಗಾಣಿಕೆ ಕಾರಿಡಾರ್

ಭಗಲ್ಪುರ್,ಥಾಣೆಯಲ್ಲಿ ನೂತನ ರೈಲ್ವೆ ವಿಭಾಗ

ಅಜ್ಮೀರ್-ಭಗಲ್ಪುರ್ ನಡುವೆ ನೂತನ ಗರೀಬ್ ರಥ್ ರೈಲು
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನಟ ಶಾರುಕ್ ಮನೆ ಮೇಲೆ ಆಗಂತುಕರ ದಾಳಿ
ಭಾರೀ ನಿರೀಕ್ಷೆಗಳೊಂದಿಗೆ ಮಧ್ಯಂತರ ರೈಲ್ವೇ ಬಜೆಟ್
ಮಂಜು: ವಿಮಾನಯಾನ ವಿಳಂಬ
ಪ್ರೇಮಿಗಳ ದಿನದಂದು ಮುಂಜಾಗ್ರತಾ ಕ್ರಮಕ್ಕೆ ಸೂಚನೆ
ಪ್ರತಿಭಟನೆ: ಸಿನ್ನಾ-ಮುಂಡಾಗೆ ಲಾಠಿ ಹೊಡೆತ !
ಸತ್ಯಂ ಹಗರಣ-ಐಟಿ ಕ್ಷೇತ್ರಕ್ಕೆ ಬಾಧಕವಿಲ್ಲ: ಪ್ರಣಬ್