ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮುಂಬೈ ದಾಳಿ ಸಂಚು ಪೂರ್ಣ ಬಹಿರಂಗಪಡಿಸಿ: ಪ್ರಣಬ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಂಬೈ ದಾಳಿ ಸಂಚು ಪೂರ್ಣ ಬಹಿರಂಗಪಡಿಸಿ: ಪ್ರಣಬ್
ಮುಂಬೈ ಭಯೋತ್ಪಾದನಾ ದಾಳಿ ಬಗ್ಗೆ ಪಾಕಿಸ್ತಾನ ನೀಡಿರುವ ಪ್ರತಿಕ್ರಿಯೆ ಸಕರಾತ್ಮಕ ಬೆಳವಣಿಗೆಯಾಗಿದೆ ಎಂದಿರುವ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ, ಪಾಕ್ ಸಂಚಿನ ವಿವರನ್ನು ಪೂರ್ಣವಾಗಿ ಬಹಿರಂಗಗೊಳಿಸಬೇಕು ಎಂದು ಆಗ್ರಹಿಸಿದರು.

ದಾಳಿ ಕುರಿತಂತೆ ಗುರುವಾರ ಪಾಕಿಸ್ತಾನ ನೀಡಿರುವ ತನಿಖೆಯ ವಿವರ ಕುರಿತಾಗಿ ಶುಕ್ರವಾರ ಸಂಸತ್ ಬಜೆಟ್ ಅಧಿವೇಶನದಲ್ಲಿ ಮಾತನಾಡಿ ಪ್ರತಿಕ್ರಿಯೆ ನೀಡಿದರು.

ಅಲ್ಲದೇ 26/11ರ ದಾಳಿ ಕುರಿತಂತೆ ಪಾಕಿಸ್ತಾನ ನಿಷ್ಪಕ್ಷಪಾತವಾಗಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅವರು, ದಾಳಿಯ ಷಡ್ಯಂತ್ರದ ಕುರಿತು ಪೂರ್ಣ ವಿವರ ಬಹಿರಂಗಪಡಿಸಬೇಕು ಎಂದರು.

ಆ ನೆಲೆಯಲ್ಲಿ ಪಾಕಿಸ್ತಾನದ ಪ್ರತಿಕ್ರಿಯೆ ಸೇರಿದಂತೆ ಎಲ್ಲಾ ಪರಿಸ್ಥಿತಿಯ ವಿಮರ್ಶೆ ಮುಂದುವರಿಸಲಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ನಮ್ಮ ಜನರಿಗೆ ಬೇಕಾದ ಸೂಕ್ತ ರಕ್ಷಣೆ ನೀಡಲಾಗುವುದು ಎಂದು ಹೇಳಿದರು.

ಭವಿಷ್ಯದಲ್ಲಿ ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಬೇಕೆಂಬ ಆಶಯ ಇದ್ದರೆ, ಮುಂಬೈ ಭಯೋತ್ಪಾದನಾ ದಾಳಿಯ ಕುರಿತಂತೆ ಸಕರಾತ್ಮಕವಾದ ಕ್ರಮ ಕೈಗೊಳ್ಳಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮುಂಬೈ: ಪ್ರೇಮಿಗಳ ದಿನಾಚರಣೆಗೆ ಶಿವಸೇನೆ ವಿರೋಧ
ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿದ 'ಶ್ರೀರಾಮಸೇನೆ ನಿಷೇಧ'
ಮಾಯಾ ಆದಾಯ ಮರು ಪರಿಶೀಲನೆಗೆ ಹೈಕೋರ್ಟ್ ಅಸ್ತು
ನಿತಾರಿ ಹತ್ಯಾಕಾಂಡ: ಪಂಧೇರ್-ಕೋಲಿಗೆ ಗಲ್ಲು
ಲಾಲು ಮತ್ತೆ 'ಜನಪರ ರೈಲ್ವೆ ಬಜೆಟ್' ಮಂಡನೆ
ನಟ ಶಾರುಕ್ ಮನೆ ಮೇಲೆ ಆಗಂತುಕರ ದಾಳಿ