ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಒರಿಸ್ಸಾ ರೈಲು ದುರಂತ: ಮೃತಪಟ್ಟವರು 9ಮಂದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒರಿಸ್ಸಾ ರೈಲು ದುರಂತ: ಮೃತಪಟ್ಟವರು 9ಮಂದಿ
ಒರಿಸ್ಸಾದಲ್ಲಿ ಶುಕ್ರವಾರ ಹೌರಾ-ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿ ಸಂಭವಿಸಿದ ದುರಂತದಲ್ಲಿ ಸತ್ತಿದ್ದು 16ಮಂದಿಯಲ್ಲ, ಕೇವಲ 9ಮಂದಿ, ಗಾಯಗೊಂಡವರು 45ಮಂದಿ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಆರ್.ವೇಲು ತಿಳಿಸಿದ್ದಾರೆ.

ರೈಲ್ವೆ ಬಜೆಟ್ ದಿನವೇ ನಡೆದ ಈ ದುರಂತದಲ್ಲಿ 16ಮಂದಿ ಮೃತಪಟ್ಟಿದ್ದು, 160 ಜನ ಗಾಯಗೊಂಡಿದ್ದಾರೆ ಎಂಬ ಪ್ರಾಥಮಿಕ ವರದಿಗಳು ಬಂದಿದ್ದವು. ಆದರೆ ಈಗ ಕೇವಲ 9ಶವಗಳು ಮಾತ್ರ ಸಿಕ್ಕಿವೆ.

ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಕೂಡ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೇ, ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡುವಂತೆ ಆದೇಶಿಸಿದ್ದಾರೆ.

ಕೋರಮಂಡಲ್ ಎಕ್ಸ್‌ಪ್ರೆಸ್ ದುರಂತದ ಬೆನ್ನಲ್ಲೇ, ಶನಿವಾರ ರೈಲ್ವೆ ಸಚಿವ ಲಾಲು ತವರು ಬಿಹಾರದಲ್ಲಿ ಮತ್ತೊಂದು ಅಪಘಾತ ಸಂಭವಿಸಿದೆ. ಗೋರಖ್‌ಪುರ-ಮುಜಾಫರ್‌ಪುರ ರೈಲು ಪೂರ್ವ ಚಂಪಾರಣ್ ಜಿಲ್ಲೆಯ ಸುಗೌಲಿ ರೈಲು ನಿಲ್ದಾಣದಲ್ಲಿ ಎಂಜಿನ್‌ಗೆ ಡಿಕ್ಕಿ ಹೊಡೆದಿದ್ದು, 16ಮಂದಿ ಗಾಯಗೊಂಡಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಾಂಗ್ರೆಸ್ ಜತೆ ಹೊಂದಾಣಿಕೆ ಇಲ್ಲ: ದೇವೇಗೌಡ
ಪಾಕ್ ಪ್ರಶ್ನೆಯಲ್ಲಿ ಕರ್ಕರೆ-ಪುರೋಹಿತ್ ಪ್ರಸ್ತಾಪ
ದಂಪತಿಗಳ ಮೇಲೆ ಸಬ್ ಇನ್ಸ್‌ಪೆಕ್ಟರ್ ಹಲ್ಲೆ
ಉಜೈನಿ: ಪ್ರೇಮಿಗಳೆಂದು ಅಣ್ಣ-ತಂಗಿಗೆ ಥಳಿತ !
ಕೋರಮಂಡಲ ಎಕ್ಸ್‌ಪ್ರೆಸ್ ದುರಂತ-ತನಿಖೆಗೆ ಆದೇಶ
ಕಾಂಗ್ರೆಸ್‌ಗೆ 'ಕೈ' ಕೊಡುವುದಿಲ್ಲ: ಅಮರ್ ಸಿಂಗ್