ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ರಾಜಸ್ಥಾನ್ ಹಳ್ಳಿ ಮೇಲೆ ವಾಯುಪಡೆ ಬಾಂಬ್ ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜಸ್ಥಾನ್ ಹಳ್ಳಿ ಮೇಲೆ ವಾಯುಪಡೆ ಬಾಂಬ್ ?
ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಧಾನಿ ಗ್ರಾಮದ ಮೇಲೆ ಶುಕ್ರವಾರ ಬೆಳಿಗ್ಗೆ ಭಾರತೀಯ ವಾಯುಪಡೆಯ (ಐಎಎಫ್) ವಿಮಾನ ಮನೆ ಹಾಗೂ ಬೆಳೆಗಳ ಮೇಲೆ ಪ್ರಯೋಗಾತ್ಮಕ ಬಾಂಬ್‌ಗಳನ್ನು ಹಾಕಿರುವುದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ.

ಆದರೆ ಗ್ರಾಮಸ್ಥರ ಈ ಆರೋಪವನ್ನು ಭಾರತೀಯ ವಾಯುಪಡೆ ಅಧಿಕಾರಿಗಳು ನಿರಾಕರಿಸಿದ್ದಾರೆ. ಆದರೆ ವಾಯುಪಡೆ ಬಾಂಬ್‌ಗಳನ್ನು ಎಸೆದಿರುವುದಾಗಿ ಆರೋಪಿಸಿ ದೋಸೆ ಖಾನ್ ಕಿ ಧಾನಿಯ ನಿವಾಸಿ ದೊಸ್ತ್ ಅಲಿ ಎಂಬವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಶುಕ್ರವಾರ ಬೆಳಿಗ್ಗೆ ಗ್ರಾಮಗಳ ಮೇಲೆ ಹಾರಾಟ ನಡೆಸಿದ ಭಾರತೀಯ ವಾಯುಪಡೆಯ ವಿಮಾನ 11.30ರ ಸುಮಾರಿಗೆ ಬಾಂಬ್‌ಗಳ ಪ್ರಯೋಗ ನಡೆಸಿದ ಪರಿಣಾಮ ಬೆಳೆ ನಾಶವಾಗಿದ್ದಲ್ಲದೆ, ಮನೆಯು ಭಾಗಶಃ ಹಾನಿಗೊಂಡಿರುವುದಾಗಿ ದೂರಿನಲ್ಲಿ ಆರೋಪಿಸಿದ್ದಾರೆ.
ಬಾಂಬ್ ಪ್ರಯೋಗದ ಸಂದರ್ಭದಲ್ಲಿಯೇ ತಾನು 2ಕಿ.ಮೀ. ಅಂತರದಲ್ಲಿ ಇದ್ದಿರುವುದಾಗಿಯೂ ಅವರು ದೂರಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.

ಐಎಎಫ್ ಬಾಂಬ್‌ಗಳ ಪ್ರಯೋಗ ನಡೆಸಿರುವುದು ಖಚಿತವಾಗಿದೆ ಎಂದು ಮೋಹನ್‌ಗಡ್ ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ಅಧಿಕಾರಿ ಸತ್ಯದೇವ್ ಆರ್‌ಹಾದಾ ಅವರು ಸ್ಪಷ್ಟಪಡಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಒರಿಸ್ಸಾ ರೈಲು ದುರಂತ: ಮೃತಪಟ್ಟವರು 9ಮಂದಿ
ಕಾಂಗ್ರೆಸ್ ಜತೆ ಹೊಂದಾಣಿಕೆ ಇಲ್ಲ: ದೇವೇಗೌಡ
ಪಾಕ್ ಪ್ರಶ್ನೆಯಲ್ಲಿ ಕರ್ಕರೆ-ಪುರೋಹಿತ್ ಪ್ರಸ್ತಾಪ
ದಂಪತಿಗಳ ಮೇಲೆ ಸಬ್ ಇನ್ಸ್‌ಪೆಕ್ಟರ್ ಹಲ್ಲೆ
ಉಜೈನಿ: ಪ್ರೇಮಿಗಳೆಂದು ಅಣ್ಣ-ತಂಗಿಗೆ ಥಳಿತ !
ಕೋರಮಂಡಲ ಎಕ್ಸ್‌ಪ್ರೆಸ್ ದುರಂತ-ತನಿಖೆಗೆ ಆದೇಶ