ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ವರುಣ್‌ರನ್ನು ಬಿಜೆಪಿ ಯುವ ಮೋದಿಯಾಗಿಸುತ್ತಿದೆ: ಮುಸ್ಲಿಂ ನಾಯಕರು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವರುಣ್‌ರನ್ನು ಬಿಜೆಪಿ ಯುವ ಮೋದಿಯಾಗಿಸುತ್ತಿದೆ: ಮುಸ್ಲಿಂ ನಾಯಕರು
ದ್ವೇಷಭಾಷಣ ಮಾಡಿರುವ ವರುಣ್ ಗಾಂಧಿಗೆ ಸಂಪೂರ್ಣ ಬೆಂಬಲ ನೀಡಿರುವ ಬಿಜೆಪಿಯ ಕ್ರಮವನ್ನು ಖಂಡಿಸಿರುವ ಮುಸ್ಲಿಂ ನಾಯಕರು, ವರುಣ್ ಅಭ್ಯರ್ಥಿತನವನ್ನು ನಿಷೇಧಿಸಲು ಒತ್ತಾಯಿಸಿದ್ದು, ಇದಕ್ಕೆ ವಿಫಲವಾದಲ್ಲಿ ಇನ್ನಷ್ಟು ಕೋಮುವಾದ ಅಭಿಮಾನಿಗಳು ಹುಟ್ಟಿಕೊಳ್ಳಲು ಇದು ಉತ್ತೇಜನ ನೀಡಿದಂತಾಗುತ್ತದೆ ಎಂದು ಎಚ್ಚರಿಸಿದೆ.

"ಬಿಜೆಪಿಯು ಪಿಲಿಭಿತ್‌ನಲ್ಲಿ ವರುಣ್ ಗಾಂಧಿ ಅವರ ಅಭ್ಯರ್ಥಿತನವನ್ನು ಒತ್ತಾಯಿಸುವುದನ್ನು ಕಂಡರೆ, ಮುಂದಿನ ಚುನಾವಣೆಯಲ್ಲಿ ತನ್ನಕೋಮುವಾದವನ್ನು ಸಂಪೂರ್ಣವಾಗಿ ಮೆರೆಯಲು ಬಯಸುತ್ತಿರುವಂತೆ ಕಾಣುತ್ತಿದೆ" ಎಂದು ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಬಿ)ಯ ಹಿರಿಯ ಸದಸ್ಯರಾಗಿರುವ ಮೌಲಾನಾ ಖಾಲಿದ್ ರಶೀದ್ ಫಿರಂಗಿಮಹ್ಲಿ ಹೇಳಿದ್ದಾರೆ.

"ವರುಣ್‌ಗೆ ಬೆಂಬಲ ನೀಡಿದಲ್ಲಿ ತಿಳುವಳಿಕೆ ಕೊರತೆ ಇರುವ ಇಂತಹ ನೊರೆಂಟು ವರುಣ್ ಗಾಂಧಿಗಳು ಮುಸ್ಲಿಂ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಬಹುದು. ಅದು ದೇಶದಲ್ಲಿ ಅಶಾಂತಿ ಹುಟ್ಟು ಹಾಕಲು ಕಾರಣವಾಗಲಿದೆ. ಹಾಗಾಗಿ ಕೇಂದ್ರ ಚುನಾವಣೆ ಆಯೋಗ ವರುಣ್ ಅವರ ಸ್ಪರ್ಧೆಯನ್ನು ರದ್ದುಗೊಳಿಸಬೇಕು ಎಂದು ರಶೀದ್ ಆಗ್ರಹಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಿಎಂಕೆ-ಎಐಎಡಿಎಂಕೆ ಹನಿಮ‌ೂನ್, ಅನ್ಬುಮಣಿ ರಾಜೀನಾಮೆ?
ನನಗೆ ಪ್ರಧಾನಿಯಾಗುವ ಇಚ್ಛೆ ಇಲ್ಲ: ಸೋನಿಯಾ
ಆಯೋಗದಿಂದ ದ್ವಂದ್ವ ನೀತಿ: ಬಿಜೆಪಿ ಆಕ್ರೋಶ
ಸ್ವರ್ಣಮಂದಿರಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ
ಸೌಮ್ಯಕೊಲೆ ಪ್ರಕರಣದ ರೂವಾರಿಗಳ ಪತ್ತೆ
ಆಯೋಗ-ಬಿಜೆಪಿ ನಡುವಿನ ಯುದ್ಧ ತಾರಕಕ್ಕೆ