ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ರಾಷ್ಟ್ರದ ಜನತೆಗೆ ಎಲ್ಲವೂ ಅರ್ಥವಾಗುತ್ತೆ: ಪ್ರಿಯಾಂಕ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಷ್ಟ್ರದ ಜನತೆಗೆ ಎಲ್ಲವೂ ಅರ್ಥವಾಗುತ್ತೆ: ಪ್ರಿಯಾಂಕ
PTI
ವರುಣ್ ಗಾಂಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಹೇಳಿಕೆಗಳಿಗೆ ಬಿಜೆಪಿಯು ಮಾಡಿರುವ ಟೀಕೆಗಳಿಗೆ ಮರುಟೀಕೆ ಮಾಡಿರುವ ಪ್ರಿಯಾಂಕಾ ಗಾಂಧಿ, "ಧರ್ಮವು ಯಾರದ್ದೇ ಆದ ಸ್ವಂತ ಆಸ್ತಿ ಅಲ್ಲ" ಎಂದಿದ್ದಾರೆ.

ವರುಣ್ ಗಾಂಧಿ ಭಗವದ್ಗೀತೆ ಓದಿ ಅರಿತುಕೊಳ್ಳಲಿ ಎಂಬುದಾಗಿ ಪ್ರಿಯಾಂಕ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಬಿಜೆಪಿ, ಪ್ರಿಯಾಂಕರಿಂದ ಹಿಂದುತ್ವದ ಕುರಿತು ಹೇಳಿಸಿಕೊಳ್ಳಬೇಕಿಲ್ಲ ಎಂದು ಹೇಳಿತ್ತು.

"ಯಾರಿಗೇ ಆದರೂ ಬೋಧಿಸಲು ನಾನ್ಯಾರು? ಆದರೆ ಒಂದಂತೂ ನಿಜ, ಧರ್ಮವು ಯಾರದ್ದೇ ಆದ ಸ್ವಂತ ಆಸ್ತಿಯಲ್ಲ" ಎಂದು ಅವರು ನುಡಿದರು.

"ಬೋಧಿಸಲು ನಾನು ಯಾರೂ ಅಲ್ಲ. ಧರ್ಮವು ಯಾರದೇ ಆಸ್ತಿಯಲ್ಲ. ಆತ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಇಲ್ಲವೇ ಭೌದ್ಧ ಧರ್ಮದವನಾಗಿದ್ದರೂ ಓರ್ವ ಸತ್ಯವಂತ ಮತ್ತು ಉತ್ತಮ ವ್ಯಕ್ತಿ ಧಾರ್ಮಿಕನಾಗಿರುತ್ತಾನೆ" ಎಂದು ಅವರು ಮಾರ್ಮಿಕವಾಗಿ ಹೇಳಿದ್ದಾರೆ.

"ನಮ್ಮ ಸಂಸ್ಕೃತಿಯ ಇದರ ಮೇಲೆ ಆಧಾರಿತವಾಗಿರುವ ಹಿನ್ನೆಲೆಯಲ್ಲಿ ಈ ರಾಷ್ಟ್ರದ ಜನತೆಯು ಅದನ್ನು ಅರ್ಥಮಾಡಿಕೊಳ್ಳುತ್ತಾರೆ ಎಂಬ ವಿಶ್ವಾಸ ತನಗಿದೆ" ಎಂದು ಅವರು ನುಡಿದರು.

ವರುಣ್ ಭಾಷಣದ ಕುರಿತು ಸುದ್ದಿಗಾರರು ಪ್ರತಿಕ್ರಿಯೆ ಬಯಸಿದ್ದ ವೇಳೆ ಅವರು, ವರುಣ್ ಗಾಂಧಿ ಭಗವದ್ಗೀತೆಯನ್ನು ಓದಿ ಸೂಕ್ತವಾಗಿ ಅರ್ಥಮಾಡಿಕೊಳ್ಳಲಿ ಎಂದು ಹೇಳಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಿನಯ್ ಕಟಿಯಾರ್‌ಗೆ ನೋಟಿಸ್
ಮಹಾರಾಷ್ಟ್ರ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಅತಿದುರ್ಬಲ ಸಿಂಗ್-ಆಡ್ವಾಣಿ: ಆಡ್ವಾಣಿ ಅವಕಾಶವಾದಿ- ಸಿಂಗ್
ರಾಷ್ಟ್ರಕ್ಕೆ ನಿಮ್ಮ ಕೊಡುಗೆ ಏನ್ ಹೇಳ್ರಿ: ಆಡ್ವಾಣಿಗೆ ಸಿಂಗ್ ಪ್ರಶ್ನೆ
ವರುಣ್‌ರನ್ನು ಬಿಜೆಪಿ ಯುವ ಮೋದಿಯಾಗಿಸುತ್ತಿದೆ: ಮುಸ್ಲಿಂ ನಾಯಕರು
ಪಿಎಂಕೆ-ಎಐಎಡಿಎಂಕೆ ಹನಿಮ‌ೂನ್, ಅನ್ಬುಮಣಿ ರಾಜೀನಾಮೆ?