ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕುಪ್ವಾರ ಗುಂಡಿನಕಾಳಗ ಅಂತ್ಯ, 17 ಉಗ್ರರ ಸಾವು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕುಪ್ವಾರ ಗುಂಡಿನಕಾಳಗ ಅಂತ್ಯ, 17 ಉಗ್ರರ ಸಾವು
ಉಗ್ರರು ಹಾಗೂ ರಕ್ಷಣಾ ಪಡೆಗಳ ನಡುವೆ ಐದು ದಿನಗಳ ಕಾಲ ನಡೆದ ಸತತ ಗುಂಡಿನ ಕಾಳಗ ಮಂಗಳವಾರ ಸಾಯಂಕಾಲದ ವೇಳೆ ಕೊನೆಗೊಂಡಿದ್ದು, ಈ ವೇಳೆ ಒಟ್ಟು 17 ಉಗ್ರರು ಹಾಗೂ ಓರ್ವ ಮೇಜರ್ ಸೇರಿದಂತೆ ಸೇನಾಪಡೆಯ 8 ಮಂದಿ ಸಾವನ್ನಪ್ಪಿದ್ದಾರೆ.

ಸೇನಾ ಪಡೆಯು ಮಾರ್ಚ್ 20ರಂದು ಬಹುದೊಡ್ಡ ಉಗ್ರರ ಪಡೆಯೊಂದಿಗೆ ಕಾದಾಟಕ್ಕೆ ಇಳಿದಿತ್ತು. ಹರ್ಪಾದ ಅರಣ್ಯದ ಶಂಸಬರಿ ವಲಯದಲ್ಲಿ ಈ ಎನ್‌ಕೌಂಟರ್ ನಡೆದಿದೆ.

ಮಂಗಳವಾರದಂದು ಐದು ಉಗ್ರರು ಸಾವನ್ನಪ್ಪಿದ್ದರು. ಸೋಮವಾರ ಒರ್ವ ಉಗ್ರ ಹತನಾಗಿದ್ದ. ಶನಿವಾರದಂದು ಮೇಜರ್ ಮೋಹಿತ್ ಶರ್ಮಾ ಸೇರಿದಂತೆ ಸೇನಾಪಡೆಯ ನಾಲ್ವರು ಉಗ್ರರ ಗುಂಡಿಗೆ ಬಲಿಯಾಗಿದ್ದರು. ಇದೇ ವೇಳೆ ಇಬ್ಬರು ಉಗ್ರರನ್ನು ಸೇನಾಪಡೆ ಹೊಡೆದುರುಳಿಸಿತ್ತು.

ಮೊದಲ ದಿನದಂದು ಮೂವರು ಉಗ್ರರು ಭದ್ರತಾ ಪಡೆಯ ಗುಂಡಿಗೆ ಆಹುತಿಯಾಗಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಾಷ್ಟ್ರದ ಜನತೆಗೆ ಎಲ್ಲವೂ ಅರ್ಥವಾಗುತ್ತೆ: ಪ್ರಿಯಾಂಕ
ವಿನಯ್ ಕಟಿಯಾರ್‌ಗೆ ನೋಟಿಸ್
ಮಹಾರಾಷ್ಟ್ರ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಅತಿದುರ್ಬಲ ಸಿಂಗ್-ಆಡ್ವಾಣಿ: ಆಡ್ವಾಣಿ ಅವಕಾಶವಾದಿ- ಸಿಂಗ್
ರಾಷ್ಟ್ರಕ್ಕೆ ನಿಮ್ಮ ಕೊಡುಗೆ ಏನ್ ಹೇಳ್ರಿ: ಆಡ್ವಾಣಿಗೆ ಸಿಂಗ್ ಪ್ರಶ್ನೆ
ವರುಣ್‌ರನ್ನು ಬಿಜೆಪಿ ಯುವ ಮೋದಿಯಾಗಿಸುತ್ತಿದೆ: ಮುಸ್ಲಿಂ ನಾಯಕರು