ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಗುಜರಾತ್ ಸಚಿವೆ ಮಾಯಾ ಸಿಟ್ ಎದುರು ಶರಣು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗುಜರಾತ್ ಸಚಿವೆ ಮಾಯಾ ಸಿಟ್ ಎದುರು ಶರಣು
ಗೋಧ್ರಾ ಗಲಭೆಯ ಆರೋಪಿ ಗುಜರಾತ್ ಸಚಿವೆ ಮಾಯಾ ಕೊಡ್ನಾನಿ ಅವರು, ಪ್ರಕರಣದ ತನಿಖೆಗಾಗಿ ಸುಪ್ರೀಂ ಕೋರ್ಟ್ ನೇಮಿಸಿರುವ ವಿಶೇಷ ತನಿಖಾ ತಂಡದ ಎದುರು ಶರಣಾಗಿದ್ದಾರೆ. ಗುಜರಾತ್ ಹೈಕೋರ್ಟ್ ಮಾಯಾ ಹಾಗೂ ಇನ್ನೋರ್ವ ಶಾಸಕ ಜೈದೀಪ್ ಪಟೇಲ್ ಅವರುಗಳಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿರುವ ಹಿನ್ನೆಲೆಯಲ್ಲಿ ಅವರಿಬ್ಬರೂ ತನಿಖಾ ತಂಡದ ಎದುರು ಹಾಜರಾಗಿದ್ದಾರೆ.

ತಲೆಮರೆಸಿಕೊಂಡಿದ್ದ ಕೊಡ್ನಾನಿ ಹೈಕೋರ್ಟ್ ಆದೇಶ ಹೊರಬೀಳುತ್ತಿರುವಂತೆ ತನ್ನ ಸಚಿವೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಗೋಧ್ರಾ ನಂತರದ ಗಲಭೆಯ ತನಿಖೆಗಾಗಿ ನೇಮಕವಾಗಿರುವ ವಿಶೇಷ ತನಿಖಾ ತಂಡದ ಎದುರು ಶರಣಾದರು. ಅವರು ಅಹಮದಾಬಾದಿನ ನರೋಡ ಪಾಟಿಯ ಮತ್ತು ನರೋಡ ಗಾಮ ಪ್ರದೇಶದಲ್ಲಿ ನಡೆದ ಗಲಭೆಗಳ ನೇತೃತ್ವ ವಹಿಸಿದ್ದರು ಎಂದು ಆಪಾದಿಸಲಾಗಿದೆ. ಈ ಗಲಭೆಯಲ್ಲಿ 106 ಮಂದಿ ಸಾವನ್ನಪ್ಪಿದ್ದರು.

ಇದೇ ವೇಳೆ ತನಿಖಾ ತಂಡವು ವಿಶ್ವಹಿಂದೂ ಪರಿಷತ್ ನಾಯಕ ಜೈದೀಪ್ ಪಟೇಲ್ ಅವರನ್ನೂ ವಶಕ್ಕೆ ತೆಗೆದುಕೊಂಡಿದೆ. ತನಿಖಾ ತಂಡವು ಮಂಡಿಸಿರುವ ಸಾಕ್ಷ್ಯಾಧಾರಗಳ ಪ್ರಕಾರ ಮೇಲ್ನೋಟಕ್ಕೆ ಇವರಿಬ್ಬರು ತಪ್ಪಿತಸ್ಥರೆಂದು ಕಾಣುವ ಕಾರಣ ಅವರ ಜಾಮೀನು ನಿರಾಕರಿಸಿರುವುದಾಗಿ ನ್ಯಾಯಾಯಲಯ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಗಾಂಧಿ ವಸ್ತುಗಳ ಹರಾಜಿಗೆ ಒಟಿಸ್ ಕ್ಷಮೆಯಾಚನೆ
3 ಪಕ್ಷಕ್ಕೂ ಸಾಮಾನ್ಯ ಚಿಹ್ನೆ ನೀಡಲು ಸು.ಕೋ ಆದೇಶ
ಇಸ್ಲಾಮಿಕ್ ಆಡಳಿತಕ್ಕಾಗಿ ಕಾಂಗ್ರೆಸ್ ಯತ್ನ: ಠಾಕ್ರೆ ಶಂಕೆ
28 ವರ್ಷ ಸಹೋದರನ ಹುದ್ದೆ ಹೊಂದಿದ್ದ ಅವಳಿ ಸಹೋದರ!
ಗುಜರಾತ್: ಮಾಯಾಬೆನ್‌ ಜಾಮೀನು ಅರ್ಜಿ ವಜಾ
ಸಿಂಗ್ ಮುಕ್ತ ಚರ್ಚೆಗೆ ಬರಲಿ: ಆಡ್ವಾಣಿ ಸವಾಲು