ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಪ್ರಧಾನಿ ಕುರಿತ ಮೋದಿ ಹೇಳಿಕೆ 'ಕಳಪೆ': ಕಾಂಗ್ರೆಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರಧಾನಿ ಕುರಿತ ಮೋದಿ ಹೇಳಿಕೆ 'ಕಳಪೆ': ಕಾಂಗ್ರೆಸ್
ಬೈಪಾಸ್ ಸರ್ಜರಿ ಬಳಿಕ ಪ್ರಧಾನಿ ಮನಮೋಹನ್ ಸಿಂಗ್ ಅವರು ಕರ್ತವ್ಯಕ್ಕೆ ಗೈರು ಹಾಜರಾಗಿರುವ ಕುರಿತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮಾಡಿರುವ ವಾಗ್ದಾಳಿ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್, 'ಬೇರಾವುದೇ ಹೇಳಿಕೆಗಳು ಇಷ್ಟೊಂದು ಕಳಪೆ ದರ್ಜೆಯವಾಗಿರಲು ಸಾಧ್ಯವಿಲ್ಲ' ಎಂದು ಹೇಳಿದೆ.

ಮೋದಿಯಂತಹ ರಾಜಕೀಯ 'ಪಿಗ್ಮಿ'ಯೊಬ್ಬರು ಪ್ರಧಾನಿಯಂತಹ ಜಾಗತಿಕ ಪ್ರತಿಷ್ಠೆಯಿರುವ ಮುತ್ಸದ್ಧಿಯನ್ನು ಟೀಕಿಸುತ್ತಿರುವುದು ಖೇದಕರ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಪ್ರತಿಕ್ರಿಯಿಸಿದ್ದಾರೆ.

'ಮೋದಿ ಅವರು ಅಸಭ್ಯ ಭಾಷೆ ಬಳಸಿದ್ದಾರೆ ಮತ್ತು ಬೈಪಾಸ್ ಸರ್ಜರಿಗಾಗಿ ಪ್ರಧಾನಿ ಮಾಡಿದ ತಾತ್ಕಾಲಿಕ ರಜೆಯ ಬಗ್ಗೆ ಟೀಕಿಸಿ ತಮ್ಮ ಹಾಗೂ ಬಿಜೆಪಿಯ ನಿಜವಾದ ಮುಖ ಮತ್ತು ಗುಣವನ್ನು ತೋರ್ಪಡಿಸಿದ್ದಾರೆ' ಎಂದು ಸಿಂಘ್ವಿ ಹೇಳಿದರು.

ಈ ಮೊದಲು ಮೋದಿ ಹೇಳಿದ್ದೇನೆಂದರೆ, "ಪ್ರಧಾನಿ ರಜೆಯಲ್ಲಿರುವಾಗ ಎರಡು ತಿಂಗಳ ಕಾಲ ಅವರನ್ನು ಯಾರೂ ನೆನಪಿಸಿಕೊಳ್ಳಲಿಲ್ಲ. ಎಲ್ಲಿಯೂ ಕಾಣಿಸಿಕೊಳ್ಳದ ಅದೃಶ್ಯ ಪ್ರಧಾನಿ ಅವರು"!
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವರುಣ್ ಗಾಂಧಿ ಬಂಧನಕ್ಕೆ ಕ್ಷಣಗಣನೆ ಆರಂಭ...
ಉತ್ತರ ಪ್ರದೇಶ: ಪಾಂಡೆ ವಿರುದ್ಧ ವಾರಂಟ್‌
ಕೇರಳ: ಸಿಪಿಎಂ ಕಾರ್ಯಕರ್ತನ ಹತ್ಯೆ
ಗುಜರಾತ್ ಸಚಿವೆ ಮಾಯಾ ಸಿಟ್ ಎದುರು ಶರಣು
ಗಾಂಧಿ ವಸ್ತುಗಳ ಹರಾಜಿಗೆ ಒಟಿಸ್ ಕ್ಷಮೆಯಾಚನೆ
3 ಪಕ್ಷಕ್ಕೂ ಸಾಮಾನ್ಯ ಚಿಹ್ನೆ ನೀಡಲು ಸು.ಕೋ ಆದೇಶ