ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ವರುಣ್‌ಗೆ ಜೈಲಿನಲ್ಲಿ ವಿಐಪಿ ಆತಿಥ್ಯವಿಲ್ಲ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವರುಣ್‌ಗೆ ಜೈಲಿನಲ್ಲಿ ವಿಐಪಿ ಆತಿಥ್ಯವಿಲ್ಲ
ಕೋಮವಾದಿ ಹೇಳಿಕೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಶನಿವಾರದಂದು ಜೈಲಿಗೆ ಕಳುಹಿಸಲಾಗಿದ್ದ ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿ ಅವರಿಗೆ ವಿಐಪಿ ಆತಿಥ್ಯ ನೀಡಲಾಗುವುದಿಲ್ಲ; ಬದಲಿಗೆ ಮನೆಯ ಅಹಾರವನ್ನು ಸೇವಿಸಲು ಅನುಮತಿ ನೀಡಲಾಗುವುದು ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಭದ್ರತಾ ಕಾರಣಗಳಿಂದಾಗಿ ವರುಣ್ ಅವರನ್ನು ಪ್ರತ್ಯೆಕ ಕೋಣೆಯಲ್ಲಿ ಇರಿಸಲಾಗಿದ್ದು, ಮನೆಯ ಅಹಾರ ಸೇವಿಸಲು ಅನುಮತಿ ನೀಡಿರುವುದನ್ನು ಹೊರತುಪಡಿಸಿ ಮತ್ತಿತರ ಸೌಲಭ್ಯಗಳನ್ನು ಒದಗಿಸುತ್ತಿಲ್ಲ ಎಂದು ಕಾರಾಗೃಹದ ಅಧಿಕಾರಿ ಮುಕೇಶ್ ಅರೋರಾ ತಿಳಿಸಿದ್ದಾರೆ.

ಮಾರ್ಚ್ 30ರವರೆಗೆ ಜೈಲಿನಲ್ಲಿರುವ ವರುಣ್‌ಗೆ ಮನೆಯ ಅಹಾರವನ್ನು ಸೇವಿಸಲು ನ್ಯಾಯಾಲಯ ಅನುಮತಿ ನೀಡಿದೆ ಎಂದು ಕಾರಾಗೃಹದ ಅಧಿಕಾರಿಗಳು ತಿಳಿಸಿದ್ದಾರೆ.

ವ್ಯೆಯಕ್ತಿಕವಾಗಿ ವರುಣ್ ಗಾಂಧಿ ನಡತೆ ಉತ್ತಮವಾಗಿದ್ದು, ಆದರೆ ಆತನ ಬೆಂಬಲಿಗರು ಶನಿವಾರದಂದು ಕಾರಾಗ್ರಹದ ಮುಂದೆ ಭಾರಿ ಉದ್ರಿಕ್ತತೆಯನ್ನು ಸೃಷ್ಟಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಾಂಗ್ರೆಸ್ ಪರ ಸಲ್ಮಾನ್ ಖಾನ್ ಪ್ರಚಾರ
ಸರಣ್‌ ಕ್ಷೇತ್ರದಿಂದ ಲಾಲು ನಾಮಪತ್ರ ಸಲ್ಲಿಕೆ
'ಅರ್ಥ್ ಆವರ್'ನಲ್ಲಿ ಭಾರತ
ಮುಸ್ಲಿಮರನ್ನು ಕಣಕ್ಕಿಳಿಸಲು ಆಗ್ರಹ
ವರುಣ್ ಬಂಧನ: ಹಿಂಸಾಚಾರಕ್ಕೆ ತಿರುಗಿದ ಪಿಲಿಭಿಟ್
ಪ್ರಧಾನಿ ಇಲ್ಲದಿದ್ದರೆ ಸೋನಿಯಾ ಚರ್ಚೆಗೆ ಸಿದ್ಧವಾಗಲಿ: ಆಡ್ವಾಣಿ