ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅಂಜಲಿ ಮನೆಮೇಲೆ ದಾಳಿ, ಕಸಬ್ ಪ್ರಕರಣದಿಂದ ಹಿಂತೆಗೆತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಂಜಲಿ ಮನೆಮೇಲೆ ದಾಳಿ, ಕಸಬ್ ಪ್ರಕರಣದಿಂದ ಹಿಂತೆಗೆತ
PTI
ಮುಂಬೈದಾಳಿಕೋರ ಅಜ್ಮಲ್ ಅಮೀರ್ ಕಸಬ್‌ನನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸಲು ಇಲ್ಲಿನ ವಿಶೇಷ ನ್ಯಾಯಾಲಯ ನೇಮಿಸಿದ್ದ ವಕೀಲೆ ಅಂಜಲಿ ವಾಘಮಾರೆ ಅವರು ತನ್ನ ಪ್ರಾತಿನಿಧ್ಯವನ್ನು ಶಂಕಿತ ರಾಜಕೀಯ ಸಂಘಟನೆಯೊಂದರ ಒತ್ತಡದ ಬಳಿಕ ಹಿಂಪಡೆದಿದ್ದಾರೆ. ಸಾರ್ವಜನಿಕರ ಭಾವನೆಗಳ ಹಿನ್ನೆಲೆಯಲ್ಲಿ ತಾನು ಕಸಬ್ ಪ್ರಕರಣದಿಂದ ಹಿಂಸರಿಯುವುದಾಗಿ ಅವರು ಹೇಳಿದ್ದಾರೆ.

ವಾರ್ಲಿ ಕ್ಯಾಂಪ್ ಪ್ರದೇಶದಲ್ಲಿರುವ ಅವರ ನಿವಾಸಕ್ಕೆ ತೆರಳಿರುವ ಸುಮಾರು 100ಕ್ಕೂ ಅಧಿಕ ಕಾರ್ಯಕರ್ತರು ವಾಘಮಾರೆ ಅವರ ಮನೆಗೆ ಕಲ್ಲೆಸೆದು ಪ್ರತಿಭಟನೆ ನಡೆಸಿದ್ದರು. ಘಟನೆಯಲ್ಲಿ ಅಂಜಲಿಯವರಿಗೆ ಹಾನಿಯಾಗದಿದ್ದರೂ, ಗುಂಪು ಚದುರಿಸಲು ಪೊಲೀಸರು ಲಘುಲಾಠಿಚಾರ್ಜ್ ನಡೆಸಿದರು. ಬಳಿಕ ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದೆ.

"ಕಸಬ್‌ನನ್ನು ನ್ಯಾಯಾಲಯದಲ್ಲಿ ಅಂಜಲಿ ಪ್ರತಿನಿಧಿಸಲು ಒಪ್ಪಿರುವ ಕ್ರಮದಿಂದ ಪ್ರತಿಭಟನಾಕಾರರು ಅಸಮಾಧಾನಿತರಾಗಿದ್ದರೆಂದು ತೋರುತ್ತದೆ. ಅವರು ಅಂಜಲಿ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು ಎಂಬುದಾಗಿ ಜಂಟಿ ಪೊಲೀಸ್ ಆಯುಕ್ತ ಕೆ.ಎಲ್ ಪ್ರಸಾದ್ ಹೇಳಿದ್ದಾರೆ.

ಪ್ರತಿಭಟನಾಕಾರರು ಒಂದೋ ಶಿವಸೇನೆಯವರು ಇಲ್ಲವೇ ಮಹಾರಾಷ್ಟ್ರ ನವನಿರ್ಮಾಣ ಸೇನೆಯವರು ಆಗಿರಬೇಕು ಎಂಬುದಾಗಿ ಪ್ರಸಾದ್ ತಿಳಿಸಿದರು.

ಕಸಬ್ ತನಗೆ ವಕೀಲರು ಬೇಕೆಂದು ನ್ಯಾಯಲಯವನ್ನು ವಿನಂತಿಸಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಕಾನೂನು ಸೇವೆ ಪ್ರಾಧಿಕಾರದ ಅಂಜಲಿ ಅವರನ್ನು ನ್ಯಾಯಾಲಯ ನೇಮಕ ಮಾಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಾಹಿತಿ ಹಕ್ಕು ನಿರಾಕರಿಸಿದರೆ ದಂಡ
ಕೇರಳದಲ್ಲಿ ಕಟ್ಟೆಚ್ಚರ
ವರುಣ್ ವ್ಯಕ್ತಿತ್ವಕ್ಕೆ ಕಳಂಕ ಹಚ್ಚುವ ಪ್ರಯತ್ನ: ವಿಹಿಂಪ
ವರುಣ್‌ಗೆ ಜಾಮೀನು, ಆದರೆ ಬಿಡುಗಡೆ ಇಲ್ಲ
ವರುಣ್ ವಿರುದ್ಧ ಎನ್ಎಸ್ಎ 'ಭಾರತಕ್ಕೆ ಅಪಾಯಕಾರಿ': ಮನೇಕಾ
ಪವಾರ್ 'ಪವರ್' ಕನಸಿಗೆ ಠಾಕ್ರೆ ವ್ಯಂಗ್ಯ