ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಉಗ್ರವಾದ ಹತ್ತಿಕ್ಕಲು ಕಾಂಗ್ರೆಸ್‌ಗೆ ಮತಬ್ಯಾಂಕ್ ಅಡ್ಡಿ: ಮೋದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಗ್ರವಾದ ಹತ್ತಿಕ್ಕಲು ಕಾಂಗ್ರೆಸ್‌ಗೆ ಮತಬ್ಯಾಂಕ್ ಅಡ್ಡಿ: ಮೋದಿ
PTI
ಭಯೋತ್ಪಾದನೆಯು ಇಂದು ರಾಷ್ಟ್ರ ಎದುರಿಸುತ್ತಿರುವ ಅತಿ ದೊಡ್ಡ ಸಮಸ್ಯೆಯಾಗಿದ್ದರೂ, ವೋಟ್‍ಬ್ಯಾಂಕ್ ರಾಜಕಾರಣದಿಂದಾಗಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್‌ಗೆ ಇದರ ವಿರುದ್ಧ ಹೋರಾಡಲಾಗುತ್ತಿಲ್ಲ ಎಂಬುದಾಗಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಭಯೋತ್ಪಾದನೆಯಿಂದಾಗಿ ರಾಷ್ಟ್ರದ ಅಭಿವೃದ್ಧಿ ನಿಂತುಬಿಟ್ಟಿದೆ ಎಂದು ಮಹಾರಾಷ್ಟ್ರದ ಮರಾಟ್ವಾಡ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಭಾಷಣದಲ್ಲಿ ನುಡಿದರು. ಅವರು ಶಿವಸೇನಾ-ಬಿಜೆಪಿ ಅಭ್ಯರ್ಥಿ ನಂದೇಡ್ ಸಾಂಬಾಜಿ ಪವಾರ್ ಪರ ಪ್ರಚಾರಕ್ಕೆ ಆಗಮಿಸಿದ್ದರು.

"ಸರ್ದಾರ್ ವಲ್ಲಭಬಾಯ್ ಪಟೇಲ್ ಅವರು ಈ ದೇಶದ ಪ್ರಥಮ ಪ್ರಧಾನಿಯಾಗಿರುತ್ತಿದ್ದರೆ ಇಂದು ರೈತರು ಆತ್ಮಹತ್ಯೆಮಾಡಿಕೊಳ್ಳುತ್ತಿರಲಿಲ್ಲ. ಯಾಕೆಂದರೆ ಅವರು ರೈತರ ನಾಯಕರಾಗಿದ್ದರು" ಎಂದು ಅವರು ರಾಜ್ಯದ ರೈತರ ಆತ್ಮಹತ್ಯಾ ಪ್ರಕರಣವನ್ನುದ್ದೇಶಿಸಿ ನುಡಿದರು.

ಕಾಂಗ್ರೆಸ್ ವಿರುದ್ಧ ಪದೇಪದೇ ವಾಗ್ದಾಳಿ ನಡೆಸಿದ ಅವರು ಯುಪಿಎ ಅಸ್ತಿತ್ವದಲ್ಲಿದೆಯೇ ಎಂದು ಪ್ರಶ್ನಿಸಿದರು.

ಬಳಿಕ ಎನ್‌ಸಿಪಿ ನಾಯಕ ಶರದ್ ಪವಾರ್ ಅವರನ್ನು ತರಾಟೆಗೆ ತೆಗೆದುಕೊಂಡ ಮೋದಿ, ಮಹಾರಾಷ್ಟ್ರ ಮತ್ತು ಕೇಂದ್ರದಲ್ಲಿ ಇದು ಸೀಟು ಹಂಚುವಿಕೆ ಒಪ್ಪಂದ ಮಾಡಿಕೊಂಡಿದ್ದರೆ, ಗುಜರಾತ್ ಹಾಗೂ ಇತೆರೆಡೆಗಳಲ್ಲಿ ಕಾಂಗ್ರೆಸ್ ವಿರುದ್ಧವಾಗಿ ಸ್ಫರ್ಧಿಸುತ್ತಿದೆ ಎಂದು ಆರೋಪಿಸಿದರು. ಎನ್‌ಸಿಪಿ ವರಿಷ್ಠ ಶರದ್ ಪವಾರ್ ಅವರ ನೀತಿಗಳು ಗಳಿಗೆಗೊಮ್ಮೆ ಬದಲಾಗುತ್ತಿರುತ್ತದೆ. ಬೆಳಗ್ಗೆ ಹೇಳಿದ್ದ ವಿಷಯಕ್ಕೆ ಸಂಪೂರ್ಣ ವ್ಯತಿರಿಕ್ತ ಹೇಳಿಕೆಗಳು ಸಂಜೆಯ ವೇಳೆಗೆ ಹೊರಬೀಳುತ್ತದೆ ಎಂದು ಅವರು ವ್ಯಂಗ್ಯವಾಡಿದರು.

1984ರ ಸಿಕ್ ನರಮೇಧದ ರೂವಾರಿ ಎಂಬ ಆಪಾದನೆಗೀಡಾಗಿರುವ ಜಗದೀಶ್ ಟೈಟ್ಲರ್ ಅವರನ್ನು ಕಣಕ್ಕಳಿಸಿರುವುದಕ್ಕೆ ಕಾಂಗ್ರೆಸ್ ಭಾರೀಯಾದ ಬೆಲೆ ತೆರಲಿದೆ ಎಂದು ಅವರು ದೂರಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದೇಶದಾದ್ಯಂತ ಐದು ಬೃಹತ್ ಸಂಚಾರಿ ಆಸ್ಪತ್ರೆ
ದೇಶ ಒಡೆದ 'ನೆಹರೂ-ಎಡ್ವಿನಾ ಲವ್ ಅಫೇರ್': ಠಾಕ್ರೆ
ಸೋನಿಯಾ ಆಸ್ತಿ: ಮಗನಿಗಿಂತ ಕಡಿಮೆ, ಇಟಲಿಯಲ್ಲೊಂದು ಮನೆ
ನಾನಾಗಿದ್ದರೆ ವರುಣ್‌ರನ್ನು ರೋಲರ್ ಕೆಳಗೆ ಕ್ರಶ್ ಮಾಡ್ತಿದ್ದೆ: ಲಾಲೂ
ಅಸ್ಸಾಮಿನ ವಿವಿಧೆಡೆ ಸ್ಫೋಟ: ಕನಿಷ್ಠ 7 ಸಾವು
ರಾಯ್‌ಬರೇಲಿಯಿಂದ ಸೋನಿಯಾ ನಾಮಪತ್ರ