ಗೃಹಸಚಿವ ಚಿದಂಬರಂ ಅವರ ಮೇಲೆ ಶೂ ಎಸೆದ ಪತ್ರಕರ್ತ ಜರ್ನೈಲ್ ಸಿಂಗ್ ವಿರುದ್ಧ ಯಾವುದೇ ಆರೋಪಗಳನ್ನು ಹೊರಿಸದೆ, ಆತನನ್ನು ಕ್ಷಮಿಸಿ ಬಿಟ್ಟುಬಿಡಲಾಗಿದೆ. ಕಾಂಗ್ರೆಸ್ ಪಕ್ಷ ಹಾಗೂ ಚಿದಂಬರಂ ಜರ್ನೈಲ್ನನ್ನು ಕ್ಷಮಿಸಿರುವ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಇನ್ನಷ್ಟು ಜಗ್ಗಲು ಯತ್ನಿಸದೆ ಅಲ್ಲಿಗೆ ಬಿಟ್ಟುಬಿಡಲಾಗಿದೆ." ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ವಿಚಾರಗಳನ್ನು ಎತ್ತುವ ಸ್ವಾತಂತ್ರ್ಯವಿದೆಯಾದರೂ, ಕೋಪಾವೇಶ ತೋರಲು ಬೂಟು ಎಸೆಯುವುದು ದುರದೃಷ್ಟಕರ" ಎಂಬುದಾಗಿ ಕಾಂಗ್ರೆಸ್ ವಕ್ತಾರ ಅಶ್ವಿನಿ ಕುಮಾರ್ ಹೇಳಿದ್ದಾರೆ. ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.ಆದರೆ ಈ ಘಟನೆಯಿಂದಾಗಿ ಪತ್ರಿಕೋದ್ಯಮದ ಘನತೆಗೆ ಧಕ್ಕೆಯುಂಟಾಗಿದೆ ಎಂದು ಅವರು ಹೇಳಿದ್ದಾರೆ.2 ಲಕ್ಷ ರೂಪಾಯಿ ಬಹುಮಾನ ಈ ಮಧ್ಯೆ, ಸಿಖ್ಖರ ಆಕ್ರೋಶದ ಪ್ರತಿಬಿಂಬ ಎಂಬಂತೆ ಸಚಿವರ ವಿರುದ್ಧ ಶೂ ಎಸೆದಿರುವ ಜಾಗರಣ್ ಪತ್ರಿಕೆಯ ಪತ್ರಕರ್ತ ಜರ್ನೈಲ್ ಸಿಂಗ್ಗೆ ಅಕಾಲಿದಳವು ಎರಡು ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ.ಚಿದು ಮೇಲೆ ಶೂ ಎಸೆದ ಭಾರತದ 'ಜೈದಿ' |