ಸಮಾಜವಾದಿ ಪಕ್ಷದ ಮುಖಂಡ ಅಮರ್ ಸಿಂಗ್ ಅವರು ಪಕ್ಷ ತೊರೆಯುವ ಬೆದರಿಕೆ ಹಾಕಿದ್ದಾರೆ. ಪಕ್ಷದ ಸದಸ್ಯ ಅಜಂ ಖಾನ್ ತನ್ನನ್ನು ಅವಮಾನಿಸಿರುವುದಾಗಿ ಅವರು ದೂರಿದ್ದಾರೆ. "ಪಕ್ಷವು ತಾನಿಲ್ಲದೆ ಉಳಿಯ ಬಲ್ಲದು, ಆದರೆ ಖಾನ್ ಇಲ್ಲದೆ ಉಳಿಯಲಾರದು ಎಂದು ತೋರುತ್ತದೆ" ಎಂಬುದಾಗಿ ಸಿಂಗ್ ಕಿಡಿಕಾರಿದ್ದಾರೆ.
ಜಯಾಪ್ರದಾ ಅವರನ್ನು ರಾಮ್ಪುರ ಕ್ಷೇತ್ರದಿಂದ ಮರುನಾಮಕರಣ ಮಾಡಿದ ವೇಳೆ ಸಮಸ್ಯೆ ಉದ್ಭವಿಸಿತ್ತು. ಜಯಾ ಅಭ್ಯರ್ಥಿತನವನ್ನು ಖಾನ್ ವಿರೋಧಿಸಿದ್ದರು.
ಈ ವೇಳೆಗೆ ಮುಲಾಯಂ ಸಿಂಗ್ ಯಾದವ್ ಅವರು ಈ ಅಲ್ಪಸಂಖ್ಯಾತರ ಬಾಹುಳ್ಯದ ಕ್ಷೇತ್ರದಲ್ಲಿ ಖಾನ್ ಅವರು ಸ್ಫರ್ಧಿಸುವಂತೆ ಸೂಚಿಸಿದರು. |