ನವದೆಹಲಿ: ಗಲ್ಲು ಶಿಕ್ಷೆಗೆ ಗುರಿಯಾಗಿರುವ ಪಾರ್ಲಿಮೆಂಟ್ ದಾಳಿಯ ರೂವಾರಿ ಅಫ್ಜಲ್ ಗುರು ಸಲ್ಲಿಸಿರುವ ಕ್ಷಮಾ ಅರ್ಜಿಗಿಂತಲೂ ಮೊದಲು ಇತ್ಯರ್ಥವಾಗಬೇಕಿರುವ 21 ಕೇಸ್ಗಳಿವೆ. ಸಾಲಿನ ಕೊನೆಯಲ್ಲಿರುವ ಅಫ್ಜಲ್ ಗುರು ಪ್ರಕರಣವನ್ನೇ ಮೊದಲ ಕೈಗೆತ್ತಿಕೊಂಡರೆ, ಅದನ್ನು ಧಾರ್ಮಿಕ ಮನೋಭಾವದಿಂದ ಬೇಧ ಮಾಡಿದಂತಾಗುತ್ತದೆ ಎಂದು ಪಿ.ಚಿದಂಬಂರಂ ಹೇಳಿದ್ದಾರೆ. ಯುಪಿಎ ಸರ್ಕಾರ ಯಾವುದನ್ನೂ ಧಾರ್ಮಿಕ ತಳಹದಿಯ ಆಧಾರದಲ್ಲಿ ಲೆಕ್ಕಾಚಾರ ಹಾಕುವುದಿಲ್ಲ ಎಂದೂ ಇದೇ ಸಂದರ್ಭ ಅವರು ಹೇಳಿದರು. |