ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಟೈಟ್ಲರ್ ದೋಷಮುಕ್ತಿ: ಪಂಜಾಬ್‌ನಾದ್ಯಂತ ಪ್ರತಿಭಟನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟೈಟ್ಲರ್ ದೋಷಮುಕ್ತಿ: ಪಂಜಾಬ್‌ನಾದ್ಯಂತ ಪ್ರತಿಭಟನೆ
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯ ಬಳಿಕ ಭುಗಿಲೆದ್ದ 1984ರ ಸಿಖ್ ನರಮೇಧ ಪ್ರಕರಣಕ್ಕೆ ಸಂಬಂಧಿಸಿದಂತೆ ಜಗದೀಶ್ ಟೈಟ್ಲರ್ ಅವರಿಗೆ ಸಿಬಿಐ ಕ್ಲೀನ್ ಚಿಟ್ ನೀಡಿರುವುದನ್ನು ವಿರೋಧಿಸಿ ಸಿಖ್ ಸಂಘಟನೆಗಳು ಪಂಜಾಬಿನಾದ್ಯಂತ ಬುಧವಾರ ಪ್ರತಿಭಟನೆ ನಡೆಸುತ್ತಿವೆ. ಇವರು ಪಂಜಾಬಿನ ಹಲವೆಡೆ ರೈಲು ತಡೆ ನಡೆಸಿದ್ದಾರೆ.

ದಮ್‌ದಮಿ ತಕ್ಸಾಲ್ ಮತ್ತು ಜಾಲ್ ಖಲ್ಸಾ ಸಂಘಟನೆಗಳನ್ನೊಳಗೊಂಡಿರುವ ಕಾರ್ಯಕರ್ತರು ಲೂಧಿಯಾನದ ಗ್ಯಾಸ್ಪುರ ಗ್ರಾಮ, ಜಲಂಧರ್‌ನ ಬಿಯಾಸ್ ಮತ್ತು ದಾಕೋಯಗಳಲ್ಲಿ ರೈಲು ತಡೆ ನಡೆಸಿದರು.

ಟೈಟ್ಲರ್ ಅವರಿಗೆ ಚುನಾವಣೆಯಲ್ಲಿ ಸ್ಫರ್ಧಿಸಲು ಕಾಂಗ್ರೆಸ್ ಟಿಕೆಟ್ ನೀಡಿರುವುದು ಮತ್ತು ಸಿಬಿಐ ಅವರನ್ನು ಸಿಖ್ ವಿರುದ್ಧ ದಂಗೆ ಪ್ರಕರಣದಲ್ಲಿ ದೋಷಮುಕ್ತಗೊಳಿಸಿರುವುದು ಸಿಖ್ ಸಮುದಾಯವನ್ನು ಕೆರಳಿಸಿ ಆಕ್ರೋಶ ಭರಿತವಾಗಿಸಿದೆ.

ಮಂಗಳವಾರ ಸಚಿವ ಚಿದಂಬರಂ ಅವರು ಪತ್ರಿಕಾಗೋಷ್ಠಿ ನಡೆಸಿದ್ದ ವೇಳೆ, ಜಗದೀಶ್ ಅವರನ್ನು ಸಿಬಿಐ ದೋಷಮುಕ್ತರನ್ನಾಗಿಸಿದ ಕ್ರಮದ ಕುರಿತು ಕೇಳಲಾದ ಪ್ರಶ್ನೆಗೆ ಅವರು ಸೂಕ್ತ ಉತ್ತರ ನೀಡಿಲ್ಲ ಎಂದು ಸಿಟ್ಟಿಗೆದ್ದ ಪತ್ರಕರ್ತ ಜರ್ನೈಲ್ ಸಿಂಗ್ ಸಚಿವರತ್ತ ಬೂಟು ಎಸೆದಿದ್ದ. ಈ ಮಧ್ಯೆ ಟೈಟ್ಲರ್ ಅಭ್ಯರ್ಥಿತನವನ್ನು ಮರುಪರಿಶೀಲಿಸುವುದಾಗಿ ಕಾಂಗ್ರೆಸ್ ಹೇಳಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
21ನೆ ಶತಮಾನ ಭಾರತದ್ದಾಗಿಸುವೆ: ಆಡ್ವಾಣಿ
ಯುಪಿಯಲ್ಲಿ ವಿಧ್ವಂಸಕ ಕೃತ್ಯನಡೆದರೆ ಆಯೋಗ ಹೊಣೆ: ಮಾಯಾ
ವರುಣ್‌ರನ್ನು ಮಾಯಾ ಉಗ್ರನಂತೆ ನಡೆಸಿಕೊಳ್ಳುತ್ತಿದ್ದಾರೆ: ಬಿಜೆಪಿ
ಮಾಧ್ಯಮಗಳ ಲೆಕ್ಕ ಪತ್ರ ತನಿಖೆಯಾಗಲಿ: ಬಿಜೆಪಿ
ರಾಷ್ಟ್ರದೊಳಗೆ ತಾಲಿಬಾನಿಗಳ ನುಸುಳುವಿಕೆ?
ಖ್ಯಾತ ಅರ್ಥಶಾಸ್ತ್ರಜ್ಞ ರಾಜಾ ಚೆಲ್ಲಯ್ಯ ವಿಧಿವಶ