ಪ್ರಧಾನಿ ಮನಮೋಹನ್ ಸಿಂಗ್ ಅವರು ಸಿಬಿಐ ನಿರ್ದೇಶಕರಿಗೆ ಗುರುವಾರ ಮುಂಜಾನೆ ತನ್ನನ್ನು ಭೇಟಿಯಾಗಲು ಸೂಚಿಸಿದ್ದು, ಜಗದೀಶ್ ಟೈಟ್ಲರ್ ಅವರನ್ನು ಸಿಖ್ ಹತ್ಯಾಕಾಂಡ ಪ್ರಕರಣದಲ್ಲಿ ದೋಷ ಮುಕ್ತಗೊಳಿಸಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.
1984ರಲ್ಲಿ ನಡೆದಿರುವ ಸಿಖ್ ವಿರೋಧಿ ದಂಗೆಯ ಕುರಿತು ಎಲ್ಲಾ ವರದಿಗಳನ್ನು ಪ್ರಧಾನಿ ಸಿಂಗ್ ಬಯಸಿದ್ದಾರೆ ಎಂಬ ವರದಿಗಳ ನಡುವೆಯೇ ಪ್ರಧಾನಿ ಅವರು ಸಿಬಿಐ ನಿರ್ದೇಶಕರ ಭೇಟಿ ಬಯಸಿದ್ದಾರೆ.
ಟೈಟ್ಲರ್ ಅವರನ್ನು ದೋಷಮುಕ್ತಗೊಳಿಸಲು ಇರುವ ಕಾರಣಗಳ ಕುರಿತು ಸ್ಪಷ್ಟವರದಿಯನ್ನು ಪ್ರಧಾನಿ ಸಿಂಗ್ ಬಯಸಿದ್ದಾರೆನ್ನಲಾಗಿದೆ.
ಸಿಬಿಐ ಟೈಟ್ಲರ್ ಅವರ ಮೇಲಿನ ಎಲ್ಲಾ ಆರೋಪಗಳನ್ನು ಮುಕ್ತವಾಗಿಸಿದ ಬಳಿಕ ಯುಪಿಎ ಎಲ್ಲೆಡೆಯಿಂದ ಒತ್ತಡ ಎದುರಿಸುತ್ತಿದೆ. ಬುಧವಾರ ಪಂಜಾಬಿನಾದ್ಯಂತ ಸಿಖ್ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದ್ದವು. |