ನವದೆಹಲಿ: ಜೆಎಂಎಂ ಲಂಚ ಹಗರಣದ ಸಾಕ್ಷಿ ನಂಬಿಕೆಗೆ ಅನರ್ಹ ಎಂದು ಪ್ರಕಟಿಸಲು ಆಗಿನ ಪ್ರಧಾನಿ ಎಚ್.ಡಿ ದೇವೇಗೌಡರ ಅತಿಯಾದ ಒತ್ತಡವೇ ಕಾರಣ ಎಂಬ ವಿಷಯವನ್ನು ಸಿಬಿಐ ಮಾಜಿ ನಿರ್ದೇಶಖ ಜೋಗೀಂದರ್ ಸಿಂಗ್ ಬಹಿರಂಗಪಡಿಸಿದ್ದಾರೆ. ಆದರೆ ಈ ಆರೋಪವನ್ನು ದೇವೇಗೌಡರು ತಳ್ಳಿಹಾಕಿದ್ದಾರೆ. ಜೆಎಂಎಂ ಹಗರಣದ ಸಾಕ್ಷಿ ಸುರಿಂದರ್ ಮಹತೋ ನಂಬಿಕೆಗೆ ಅರ್ಹವಲ್ಲ ಎಂದು ನ್ಯಾಯಾಲಕ್ಕೆ ಪ್ರಮಾಣಪತ್ರವನ್ನು ಸಲ್ಲಿಸಲು ಗೌಡರು ತನಗೆ ಸೂಚಿಸಿದ್ದರು. ಅದಕ್ಕೆ ನಾನು ಒಪ್ಪಿರಲಿಲ್ಲ ಎಂದು ಸಿಂಗ್ ಹೇಳಿದ್ದಾರೆ. |