ಪ್ರತ್ಯೇಕತಾವಾದಿ ನಾಯಕ ಸಜ್ಜದ್ ಲೋನ್ ಅವರು ಮುಂಬರುವ ಚುನಾವಣೆಯಲ್ಲಿ ಸ್ಫರ್ಧಿಸುವ ತನ್ನ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಇವರು ಪ್ರಜಾತಾಂತ್ರಿಕ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡ ಪ್ರಥಮ ಪ್ರತ್ಯೇಕವಾದಿ ನಾಯಕರಾಗಿದ್ದಾರೆ.
ಪಾಕಿಸ್ತಾನ ಅಥವಾ ಕೆಲವು ಸಂಸ್ಥೆಗಳು ಚುನಾವಣೆಯಲ್ಲಿ ಸ್ಫರ್ಧಿಸುವ ತನ್ನ ನಿರ್ಣವನ್ನು ಇಷ್ಟಪಡಲಿಕ್ಕಿಲ್ಲ. ಆದರೆ ಕಾಶ್ಮೀರದ ಜನತೆಯನ್ನು ಪ್ರತಿನಿಧಿಸಲು ದೊಡ್ಡಮಟ್ಟದ ವೇದಿಕೆಯ ಅವಶ್ಯಕತೆ ಇರುವ ಕಾರಣ ತಾನು ಸಂಸತ್ತನ್ನು ತಲುಪುವ ಅವಶ್ಯಕತೆ ಇದೆ ಎಂದು ಅವರು ಹೇಳಿದ್ದಾರೆ.
ಹುರಿಯತ್ ಕಾನ್ಫರೆನ್ಸ್ ಸಂಸ್ಥಾಪಕ ಅಬ್ದುಲ್ ಘಾನಿ ಲೋನ್ ಅವರ ಪುತ್ರರಲ್ಲೊಬ್ಬರಾಗಿರುವ ಸಜ್ಜದ್ ಅವರು, ತನ್ನನ್ನು ಪೂರ್ವಗ್ರಹ ದೃಷ್ಟಿಯಿಂದ ನೋಡಬಾರದು, ಬದಲಿಗೆ ಅದೇ ಸಿದ್ಧಾಂತಕ್ಕಾಗಿ ಹೊಸವಿಧಾನದ ಮೂಲಕ ಮುನ್ನಡೆಯಲು ಅವಕಾಶ ನೀಡಬೇಕು ಎಂದು ಹೇಳಿದ್ದಾರೆ.
"ನಂಗೊಂದು ಅವಕಾಶ ನೀಡಿ... ನನ್ನಗೆಲುವಿಗೆ ಪ್ರಾರ್ಥಿಸಿ" ಎಂದವರು ವಿನಂತಿಸಿದ್ದಾರೆ. |