ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅಡ್ವಾಣಿ, ಅಟಲ್‌ರನ್ನು ಸಮುದ್ರಕ್ಕೆ ಎಸೆಯಿರಿ: ಹರಿಪ್ರಸಾದ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಡ್ವಾಣಿ, ಅಟಲ್‌ರನ್ನು ಸಮುದ್ರಕ್ಕೆ ಎಸೆಯಿರಿ: ಹರಿಪ್ರಸಾದ್
ಕಾಂಗ್ರೆಸ್‌ನ್ನು ಮುದುಕಿ ಎಂದು ಕರೆದಿರುವ ಬಿಜೆಪಿಯ ಮೇಲೆ ತನ್ನ ತೀವ್ರ ವಾಗ್ದಾಳಿಯನ್ನು ಮುಂದುವರಿಸಿರುವ ಕಾಂಗ್ರೆಸ್, ಬಿಜೆಪಿಯಲ್ಲಿರುವ ಮುದುಕರಾದ ಎಲ್.ಕೆ. ಆಡ್ವಾಣಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಅರಬ್ಬೀ ಸಮುದ್ರಕ್ಕೆಸೆಯಿರಿ ಎಂದು ಹೇಳಿದೆ.

ಗೋವಾದಲ್ಲಿ ಸುದ್ದಿಗಾರರ ಜತೆ ಮಾತನಾಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್, ಕಾಂಗ್ರೆಸ್‌ಗೆ ಮುದಿಪಕ್ಷದ ಪಟ್ಟ ತೊಡಿಸುವ ಬಿಜೆಪಿ ತಮ್ಮ ಪ್ರಧಾನಿ ಅಭ್ಯರ್ಥಿ ಮುದುಕ ಎಂಬುದನ್ನು ಮರೆತಂತಿದೆ. ಮೊದಲು ಬಿಜೆಪಿ ವಯೋವೃದ್ಧ ವಾಜಪೇಯಿಯವರನ್ನು ಅರಬ್ಬಿ ಸಮುದ್ರಕ್ಕೆಎಸೆಯಲಿ. ನಂತರ ಪ್ರಧಾನಿಯಾಗುವ ಕನಸು ಕಾಣುತ್ತಿರುವ ಅಡ್ವಾಣಿ ಅವರನ್ನೂ ಸಮುದ್ರಕ್ಕೆ ಎಸೆದುಬಿಡಲಿ ಎಂದು ಖಾರವಾಗಿ ನುಡಿದಿದ್ದರು.

ಮುದಿ ಪಕ್ಷವಾಗಿರುವ ಕಾರಣ ಜನತೆ ಕಾಂಗ್ರೆಸನ್ನು ಕಸದಬುಟ್ಟಿಗೆಸೆಯಬೇಕು ಎಂದು ಬಿಜೆಪಿ ನಾಯಕ ನರೇಂದ್ರ ಮೋದಿ ಚುನಾವಣಾ ಪ್ರಚಾರ ಭಾಷಣದಲ್ಲಿ ಹೇಳಿದ್ದರು.

ಮಕ್ಕಳು, ಮಹಿಳೆಯರು ಮತ್ತು ವಯಸ್ಸಾದವರನ್ನು ನಾವು ಹೇಗೆ ನಡೆಸಿಕೊಳ್ಳುವುದರ ಮೇಲೆ ಒಬ್ಬ ವ್ಯಕ್ತಿ ಇಲ್ಲವೇ ಸಮಾಜ ಯಾ ರಾಷ್ಟ್ರದ ಸಂಸ್ಕೃತಿಯನ್ನು ಅಳೆಯಲಾಗುತ್ತದೆ ಎಂದು ಅವರು ನುಡಿದರು. ಅಲ್ಲದೆ ಕಾಂಗ್ರೆಸ್ ಯಾವತ್ತು ಸಂಪ್ರದಾಯ ಮತ್ತು ಪರಂಪರೆಯನ್ನು ಗೌರವಿಸುತ್ತದೆ ಎಂದು ನುಡಿದರು.

ಕೆಲವು ವರ್ಷಗಳ ಹಿಂದೆ ಕರ್ನಾಟಕದ ಅಂದಿನ ಮುಂಖ್ಯಮಂತ್ರಿಯಾಗಿದ್ದ ಗುಂಡೂರಾವ್ ಅವರೂ ಪತ್ರಕರ್ತರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿ, ಪತ್ರಕರ್ತರನ್ನೆಲ್ಲ ಸಮುದ್ರಕ್ಕೆ ಎಸೆದುಬಿಡಬೇಕು ಎಂದಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹರಿಪ್ರಸಾದ್, ಅಡ್ವಾಣಿ, ಅಟಲ್, Hariprasad, Advani, Atal
ಮತ್ತಷ್ಟು
ನ್ಯಾಯಾಲಯದಲ್ಲೂ ಹೈ ಟೆಕ್ ತಂತ್ರಜ್ಞಾನ
ಮಹಾಜನ್ ಫಿಕ್ಸರ್, ಡೀಲರ್, ಡಬಲ್ ಡೀಲರ್: ಪ್ರವೀಣ್
ಕಾಂಗ್ರೆಸ್ ಬುಡಿಯಾ ಅಲ್ಲ ಗುಡಿಯಾ: ಮೋದಿ
ಒಂದಲ್ಲ ಒಂದಿನ ರಾಹುಲ್ ಪ್ರಧಾನಿಯಾಗ್ತಾರೆ: ಪ್ರಿಯಾಂಕ
ಹಿಂದುತ್ವ ಭಾರತೀಯ ಸಿದ್ಧಾಂತವಲ್ಲ: ಪ್ರಣಬ್
ವರುಣ್ ರಾಷ್ಟ್ರೀಯ ಭೀತಿ: ಯುಪಿ ಸರ್ಕಾರ