ಮಧ್ಯಪ್ರದೇಶದ ಭಿಂಡ್ನ ಗೋಹಾದ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಮಖಾನ್ ಲಾಲ್ ಜಾಟವ್ ಅವರನ್ನು ಕೆಲವು ಅಜ್ಞಾತ ಬಂದೂಕುಧಾರಿಗಳು ಗುಂಡಿಟ್ಟು ಹತ್ಯೆ ಮಾಡಿದ ಘಟನೆ ಸೋಮವಾರ ಜರುಗಿದೆ.
ಶಾಸಕರನ್ನು ದುಷ್ಕರ್ಮಿಗಳು ಅತೀ ಸಮೀಪದಿಂದಲೇ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಶಾಸಕರು ಚೆಹಾಟಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭಾಗಿರಥಿ ಪ್ರಸಾದ್ ಪರ ಚುನಾವಣೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬಳಿಕ ಹಿಂತಿರುಗಿ ಬರುವಾಗ ದುಷ್ಕರ್ಮಿಗಳಿಂದ ಗುಂಡಿನ ದಾಳಿಗೆ ಆಹುತಿಯಾದರು.
ಶಾಸಕರಿಗೆ ಗುಂಡು ತಗುಲಿದ ಕೂಡಲೇ ಅವರನ್ನು ಗ್ವಾಲಿಯರ್ ಖಾಸಗಿ ಆಸ್ಪತ್ರೆಗೆ ಒಯ್ಯಲಾಯಿತಾದರೂ ಅಲ್ಲಿಗೆ ತೆರಳುವಷ್ಟರಲ್ಲಿ ಪ್ರಾಣಪಕ್ಷಿ ಹಾರಿಹೋಗಿತ್ತೆಂದು ಪೊಲೀಸರು ತಿಳಿಸಿದ್ದಾರೆ.
|