ಆರ್ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಅವರು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಚುನಾವಣೆ ಆಯೋಗವು ನೋಟಿಸ್ ಜಾರಿ ಮಾಡಿದೆ.
ಕಳೆದ ವಾರ ಚುನಾವಣೆ ಪ್ರಚಾರದ ಸಲುವಾಗಿ ಜಾರ್ಖಂಡ್ನಲ್ಲಿರುವ ಗಾರ್ವಾ ಹೆಲಿಪ್ಯಾಡ್ನಲ್ಲಿ ತಮ್ಮ ಹೆಲಿಕಾಪ್ಟರ್ ಇಳಿಸುವುದಕ್ಕೆ ಬದಲಾಗಿ ಲಾಲು ಪ್ರಸಾದ್ ಶಾಲೆಯ ಕಾಂಪೌಂಡ್ನಲ್ಲಿ ಹೆಲಿಕಾಪ್ಟರ್ ಇಳಿಸಿದ್ದರು.
ಈ ಸಂಬಂಧ ಚುನಾವಣಾ ಆಯೋಗವು ಅವರಿಗೆ ನೋಟಿಸ್ ನೀಡಿದ್ದು, ನಾಳೆ 4 ಗಂಟೆಯೊಳಗೆ ಉತ್ತರಿಸುವಂತೆ ಸೂಚಿಸಿದೆಯೆಂದು ಸಹಾಯಕ ಮುಖ್ಯ ಚುನಾವಣಾಧಿಕಾರಿ ಎ.ಕೆ. ಸಿನ್ಹಾ ತಿಳಿಸಿದ್ದಾರೆ.
ಲಾಲು ಕುಳಿತಿದ್ದ ಹೆಲಿಕಾಪ್ಟರ್ ಏಪ್ರಿಲ್ 7ರಂದು ಸಮೀಪದ ಹೆಲಿಪ್ಯಾಡ್ನಲ್ಲಿ ಇಳಿಯುವ ಬದಲಿಗೆ ಚುನಾವಣೆ ಸಭೆಯ ಬಳಿ ಇಳಿಸಿದ್ದರಿಂದ ನೋಟಿಸ್ ನೀಡಲಾಗಿದೆ. ಶಾಲಾ ಕಾಂಪೌಂಡ್ನಲ್ಲಿ ಹೆಲಿಕಾಪ್ಟರ್ ಇಳಿಸಿದ್ದು ನೀತಿ ಸಂಹಿತೆ ಉಲ್ಲಂಘನೆಯಾದ್ದರಿಂದ ಅದೇ ದಿನ ಗಾರ್ವಾ ಜಿಲ್ಲಾಡಳಿತ ಕೂಡ ಎಫ್ಐಆರ್ ಸಲ್ಲಿಸಿತ್ತು.
|