ತಾನು ಪ್ರಧಾನಿ ಹುದ್ದೆಯ ಸ್ಫರ್ಧೆಯಲ್ಲಿಲ್ಲ ಎಂಬುದಾಗಿ ಅಖಿಲ ಭಾರತೀಯ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ(ಎಐಎಡಿಎಂಕೆ) ವರಿಷ್ಠೆ ಜೆ. ಜಯಲಲಿತಾ ಹೇಳಿದ್ದಾರೆ. "ತನಗೆ ವೈಯಕ್ತಿವಾಗಿ ಯಾವುದೇ ಮಹತ್ವಾಕಾಂಕ್ಷೆ ಇಲ್ಲ. ನಮ್ಮ ರಾಷ್ಟ್ರದ ಅಭ್ಯುದಯ ರಾಗೂ ಅಂತಾರಾಷ್ಟ್ರೀಯ ಸಮುದಾಯದಲ್ಲಿ ರಾಷ್ಟ್ರಕ್ಕೆ ಉನ್ನತ ಸ್ಥಾನಮಾನ ಲಭಿಸುವುದಷ್ಟೆ ನನಗೆ ಬೇಕಿರುವುದು" ಎಂಬುದಾಗಿ ಅವರು ಹೇಳಿದ್ದಾರೆ.ಇದೇವೇಳೆ ತಮ್ಮ ಪಕ್ಷವು ಇತರ ಯಾವುದೇ ಪಕ್ಷದೊಂದಿಗೂ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಅವರು ಸ್ಫಷ್ಟಪಡಿಸಿದರು." ಎಐಎಡಿಎಂಕೆಯು ಎಡಪಕ್ಷಗಳು, ಪಿಎಂಕೆ, ಮತ್ತು ಎಂಡಿಎಂಕೆಯೊಂದಿಗೆ ಮೈತ್ರಿ ಹೊಂದಿದೆ. ಹಾಗಾಗಿ ಇನ್ಯಾವುದೇ ಪಕ್ಷದೊಂದಿಗೂ ಚುನಾವಣೋತ್ತರ ಮೈತ್ರಿಯ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದಾರೆ. ಬಿಜೆಪಿಯು ಎಐಎಡಿಎಂಕೆಯೊಂದಿಗೆ ಚುನಾವಣೋತ್ತರ ಮೈತ್ರಿಯ ಮಾತುಕತೆ ನಡೆಸುತ್ತಿದೆ ಎಂಬುದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.ತಮಿಳ್ನಾಡಿನಲ್ಲಿ 39 ಲೋಕಸಭಾ ಕ್ಷೇತ್ರಗಳಿವೆ. ಪ್ರಸ್ತುತ ಜಯಲಲಿತಾ ಅವರು ತೃತೀಯರಂಗದ ಭಾಗವಾಗಿ ಗುರುತಿಸಿಕೊಂಡಿದ್ದಾರೆ. |