ಮುಂಬೈದಾಳಿ ವೇಳೆ ಸೆರೆಸಿಕ್ಕಿರುವ ಉಗ್ರ ಅಜ್ಮಲ್ ಅಮೀರ್ ಕಸಬ್ ತನಗೆ ಪಾಕಿಸ್ತಾನದ ವಕೀಲರ ಪ್ರಾತಿನಿಧ್ಯಬೇಕು ಎಂಬುದಾಗಿ ಬುಧವಾರ ವಿಶೇಷ ನ್ಯಾಯಾಲಯವನ್ನು ವಿನಂತಿಸಿದ್ದಾನೆ.
ಕಸಬ್ಗೆ ನೇಮಕ ಮಾಡಲಾಗಿದ್ದ ವಕೀಲೆ ಅಂಜಲಿ ವಾಘ್ಮೋರೆ ಅವರನ್ನು ವೃತ್ತಿ ಧರ್ಮಕ್ಕೆ ಚ್ಯುತಿಯುಂಟು ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ವಜಾ ಮಾಡಿರುವ ಬಳಿಕ ಅಜ್ಮಲ್ ನ್ಯಾಯಾಲಯದ ಮುಂದೆ ಈ ಬೇಡಿಕೆ ಸಲ್ಲಿಸಿದ್ದಾನೆ.
ಮೊದಲ ಬಾರಿಗೆ ಕಸಬ್ ಬುಧವಾರ ಬಿಗಿ ಭದ್ರತೆಯಲ್ಲಿ ನ್ಯಾಯಾಲಯದಲ್ಲಿ ಇಂದು ವ್ಯಕ್ತಿಗತವಾಗಿ ಹಾಜರಾಗಿದ್ದಾನೆ. ಈತನ ವಿನಂತಿಯನ್ನು ರಾಜತಾಂತ್ರಿಕ ವಾಹಿನಿಗಳ ಮೂಲಕ ಪಾಕಿಸ್ತಾನ ಸರ್ಕಾರಕ್ಕೆ ರವಾನಿಸಲಾಗವುದು ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕಮ್ ಹೇಳಿದ್ದಾರೆ. |