ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮಾಯಾಗೆ ಬೆದರಿಕೆ: ದಿಗ್ವಿಜಯ್ ಮೇಲೆ ಕೇಸು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾಯಾಗೆ ಬೆದರಿಕೆ: ದಿಗ್ವಿಜಯ್ ಮೇಲೆ ಕೇಸು
ಉತ್ತರಪ್ರದೇಶ ಮುಖ್ಯಮಂತ್ರಿ ಮಾಯಾವತಿ ವಿರುದ್ಧ ಸಿಬಿಐ ಬಳಸುವುದಾಗಿ ಬೆದರಿಕೆ ಹಾಕಿ ಚುನಾವಣಾ ನೀತಿಸಂಹಿತೆ ಉಲ್ಲಂಘಿಸಿದ್ದಾರೆ ಎಂಬ ಆರೋಪಕ್ಕೆ ಒಳಗಾಗಿರುವ ಕಾಂಗ್ರೆಸ್ ನಾಯಕ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

"ಜಿಲ್ಲಾಡಳಿತದ ನಿರ್ದೇಶನದ ಪ್ರಕಾರ, ಮಂಗಳವಾರ ರಾತ್ರಿ ದಿಗ್ವಿಜಯ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ" ಎಂದು ಹರ್ದೋಯಿ ಡಿಎಸ್ಪಿ ಬಿ.ಬಿ. ಚೌರಾಸಿಯಾ ತಿಳಿಸಿದ್ದಾರೆ.

ಹರ್ದೋಯಿ ಜಿಲ್ಲೆಯ ಮಲ್ವಾನ್ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಸಮಾವೇಶ ಒಂದರಲ್ಲಿ ಭಾಷಣ ಮಾಡುತ್ತಿದ್ದ ದಿಗ್ವಿಜಯ್ ಸಿಂಗ್, ಉತ್ತರಪ್ರದೇಶ ಸರ್ಕಾರವು ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ದೌರ್ಜನ್ಯ ನಿಲ್ಲಿಸದೇ ಇದ್ದರೆ ಕೇಂದ್ರ ಸರ್ಕಾರವು ಅವರ ವಿರುದ್ಧ ಸಿಬಿಐಯನ್ನು 'ಬಳಸಲಿದೆ' ಎಂಬುದಾಗಿ ಹೇಳಿದ್ದಾರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ದಿಗ್ವಿಜಯ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಿಹಾರ: ನಕ್ಸಲರಿಂದ ಕಚೇರಿಗೆ ಬಾಂಬ್, ಟ್ರಕ್‌ಗಳಿಗೆ ಬೆಂಕಿ
ಜಾರ್ಖಂಡ್: ರೈಲು ಒತ್ತೆ ಪ್ರಹಸನ ಅಂತ್ಯ, ಪ್ರಯಾಣಿಕರು ಸುರಕ್ಷಿತ
ಇನ್ನೂ ಯುಪಿಎಯಲ್ಲೇ ಇದ್ದೀನ್ರಿ ಅಂದ್ರಂತೆ ಲಾಲೂ
12 ಗಂಟೆ ತಮಿಳ್ನಾಡು ಬಂದ್‌ಗೆ ಕರೆ ನೀಡಿದ ಕರುಣಾನಿಧಿ
ಲಾಲು ವಿರುದ್ಧ ಪ್ರಣವ್‌ ಹೇಳಿಕೆ
ಚುನಾವಣೆಗೆ ನಕ್ಸಲ್ ಭೀತಿ: ಕಟ್ಟೆಚ್ಚರ