ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕಸಬ್ ಜೈಲಿನಲ್ಲಿರುವ ಮುದ್ದುಕೋಳಿ: ವರುಣ್ ಗಾಂಧಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಸಬ್ ಜೈಲಿನಲ್ಲಿರುವ ಮುದ್ದುಕೋಳಿ: ವರುಣ್ ಗಾಂಧಿ
ಹಲವಾರು ಮಂದಿ ಅಮಾಯಕರನ್ನು ಗುಂಡಿಕ್ಕಿ ಕೊಂದಿರುವ ಅಬ್ದುಲ್ ಕಸಬ್‌ನನ್ನು ಜೈಲಿನಲ್ಲಿ ಮುದ್ದುಮಾಡಲಾಗುತ್ತದೆ ಎಂಬುದಾಗಿ ಬಿಜೆಪಿಯ ವಿವಾದಾಸ್ಪದ ನಾಯಕ ವರಣ್ ಗಾಂಧಿ ಆಲಿಗರ್‌ನಲ್ಲಿ ಬುಧವಾರ ತನ್ನ ಚುನಾವಣಾ ಪ್ರಚಾರ ಭಾಷಣದ ವೇಳೆ ಹೇಳಿದ್ದಾರೆ.

ಕೋಮುಪ್ರಚೋದಕ ಭಾಷಣ ಮಾಡಿರುವ ಆರೋಪದ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆ ಹೇರಿ ನನ್ನನ್ನು ಇಟಾ ಜೈಲಿನಲ್ಲಿರಿಸಿ ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳಲಾಯಿತು ಎಂದು ಅವರು ಆಪಾದಿಸಿದರು.

"ನಮ್ಮ ದೇಶದ ಈ ವಾತಾವರಣಕ್ಕೇನನ್ನಬೇಕು ಎಂದು ಪ್ರಶ್ನಿಸಿದ ಅವರು, "ವರುಣ್ ಗಾಂಧಿಯನ್ನು ರಾಷ್ಟ್ರೀಯ ಭದ್ರತೆಯ ಕಾಯ್ದೆಯಡಿ ಜೈಲಿಗೆ ತಳ್ಳಲಾಯಿತು. ಆದರೆ ವಿಧ್ವಂಸಕ ಕೃತ್ಯಗಳನ್ನು ಎಸೆದ ಕಸಬ್‌ನನ್ನು ಜೈಲಿನಲ್ಲಿ ಮುದ್ದುಕೋಳಿಯಂತೆ ನಡೆಸಿಕೊಳ್ಳಲಾಗುತ್ತಿದೆ" ಎಂದು ಅವರು ಘಟನೆಗಳನ್ನು ಸಮೀಕರಿಸಿದರು.

"ನೀವು ಕಾಂಗ್ರಸ್‌ಗೆ ಮತ ಹಾಕುವ ಬದಲಿಗೆ ಅದನ್ನು ಚರಂಡಿಗೆ ಎಸೆಯುವುದು ಲೇಸು" ಎಂದೂ ಅವರು ಈ ಸಂದರ್ಭದಲ್ಲಿ ನುಡಿದರು.

ಕೋಮುಪ್ರಚೋದಕ ಭಾಷಣ ಮಾಡಿರುವ ಆಪಾದನೆ ಹಿನ್ನೆಲೆಯಲ್ಲಿ ಬಂಧನಕ್ಕೀಡಾಗಿದ್ದ ವರುಣ್ 15 ದಿವಸಗಳ ಪೆರೋಲ್ ಮೇಲೆ ಬಿಡುಗಡೆ ಹೊಂದಿದ್ದಾರೆ. ಇವರು ಉತ್ತರ ಪ್ರದೇಶದ ಪಿಲಿಭಿತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಾರತಕ್ಕೆ ಎಲ್ಟಿಟಿಇ ಉಗ್ರರು ನುಸುಳುವ ಸಾಧ್ಯತೆ: ವರದಿ
ಕಸಬ್‌ಗೆ ಉರ್ದು ಪತ್ರಿಕೆ, ಪಾಕ್ ಪರ್ಫ್ಯೂಮ್ ಬೇಕಂತೆ
ರಾಮ ಮಂದಿರ ನಿರ್ಮಿಸಿಯೇ ಸಿದ್ಧ - ರಾಜ್‌ನಾಥ್
ಹಂದಿಜ್ವರ ತಡೆಗೆ ವ್ಯಾಪಕ ಕಟ್ಟೆಚ್ಚರದ ಕ್ರಮ
'ಇಟಲಿ ಉದ್ಯಮಿಗೆ ಕ್ಲೀನ್ ಚಿಟ್, ಮಣ್ಣಿನ ಮಗನಿಗೆ ಜೈಲು'
ಪ್ರಧಾನಿ ಸ್ಥಾನ: ಸಿಂಗ್‌ಗೇ ಕರುಣಾನಿಧಿ ವೋಟು