ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > 'ಅಫ್ಜಲ್‌ಗೆ ಮೃದುಧೋರಣೆ, ವರುಣ್‌ಗೆ ಗಲ್ಲು'
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಅಫ್ಜಲ್‌ಗೆ ಮೃದುಧೋರಣೆ, ವರುಣ್‌ಗೆ ಗಲ್ಲು'
PTI
ಬಿಜೆಪಿಯ ಪೋಸ್ಟರ್ ಬಾಯ್ ಆಗಿ ನಿರೂಪಣೆಗೊಳ್ಳುತ್ತಿರುವ ತರುಣ ನಾಯಕ ವರುಣ್ ಗಾಂಧಿ ವಿರುದ್ಧ ಹೇರಲಾಗಿರುವ ಎನ್ಎಸ್ಎ ಕಾಯ್ದೆ ಹಿಂತೆಗೆತ ಸಲಹೆಯನ್ನು ಸ್ವಾಗತಿಸಿರುವ ಬಿಜೆಪಿಯು, ಅಲಹಾಬಾದ್ ಹೈಕೋರ್ಟ್ ಸಲಹಾ ಮಂಡಳಿಯ ಈ ನಿರ್ಧಾರವು ಯುಪಿಎ ಸರ್ಕಾರ ಮತ್ತು ಅದರ ಮತಬ್ಯಾಂಕ್ ರಾಜಕೀಯವನ್ನು ಹರಾಜು ಹಾಕಿದಂತಾಗಿದೆ ಎಂದು ಹೇಳಿದೆ.

ವರುಣ್ ಗಾಂಧಿವಿರುದ್ಧ ಎನ್ಎಸ್ಎ ಕಾಯ್ದೆ ಹೇರಿರುವುದು ಮತಬ್ಯಾಂಕ್ ರಾಜಕೀಯಕ್ಕಾಗಿ ಹೂಡಿರುವ ಸಂಚು, ಅಲ್ಲದೆ ಆತನ ವಿರುದ್ಧ ತನಿಖೆಯನ್ನೂ ನಡೆಸದೆ ಕೇಂದ್ರ ಸರ್ಕಾರವು ಆತನ ವಿರುದ್ಧ ಎನ್ಎಸ್ಎ ಹೇರಲು ಬಯಸಿತ್ತು ಎಂದು ಬಿಜೆಪಿ ವಕ್ತಾರ ಪ್ರಕಾಶ್ ಜಾವಡೇಕರ್ ಪಿಟಿಐ ಜತೆ ಮಾತನಾಡುತ್ತಾ ತಿಳಿಸಿದ್ದಾರೆ.

ಎನ್‌ಎಸ್ಎ ಹಿಂತೆಗೆಯುವಂತೆ ಸಮಿತಿಯು ಶಿಫಾರಸ್ಸು ಮಾಡಿರುವುದು ಕೇಂದ್ರದ ನಿಲುವನ್ನು ಬಹಿರಂಗ ಪಡಿಸಿದೆ ಎಂದು ಅವರು ನುಡಿದರು.

"ಕೇಂದ್ರ ಸರ್ಕಾರವು ಬೋಫೋರ್ಸ್ ಹಗರಣದ ಪ್ರಮುಖ ಆರೋಪಿ ಒಟ್ಟಾವಿಯೋ ಕ್ವಟ್ರೋಚಿ ಅವರನ್ನು ಮುಕ್ತವಾಗಿಸಲು ತರಾತುರಿ ತೋರಿದೆ, ಸಂಸತ್ತಿನ ಮೇಲೆ ದಾಳಿ ನಡೆಸಿರುವ ಉಗ್ರನ ಬಗ್ಗೆ ಮೆದು ಧೋರಣೆ ತಾಳಿದೆ. ಆದರೆ ವರುಣ್‌ನನ್ನು ಗಲ್ಲಿಗೇರಿಸಲು ಯತ್ನಿಸುತ್ತಿದೆ" ಎಂದು ಅವರು ವ್ಯಂಗ್ಯವಾಡಿದರು.

ಈ ಸಂಪೂರ್ಣ ಪ್ರಕರಣದಲ್ಲಿ ಮಾಯಾವತಿ ಸರ್ಕಾರ ವಹಿಸಿದ್ದ ಪಾತ್ರವೂ ಕೇಂದ್ರ ಸರ್ಕಾರದ ಪಾತ್ರಕ್ಕಿಂತ ಭಿನ್ನವಾಗಿರಲಿಲ್ಲ ಎಂದು ದೂರಲು ಬಿಜೆಪಿ ನಾಯಕ ಮರೆಯಲಿಲ್ಲ. ಯುಪಿ ಮತ್ತು ಯುಪಿಎ ಸರ್ಕಾರಗಳು ಒಂದೇ ತೆರನಾದ ಮತಬ್ಯಾಂಕ್ ರಾಜಕೀಯ ಮಾಡುತ್ತಿದೆ ಎಂದು ಜಾವಡೇಕರ್ ಆರೋಪಿಸಿದರು.

ವರುಣ್ ಮೇಲೆ ಎನ್ಎಸ್ಎ 'ಅಸಿಂಧು': ಹಿಂತೆಗೆತ ಶಿಫಾರಸು
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮೊಯ್ಲಿ ಮಾಧ್ಯಮ ಮುಖ್ಯಸ್ಥ ಸ್ಥಾನಕ್ಕೆ ಕೊಕ್!
ದೋಡಾ ಗುಂಡಿನ ಕಾಳಗ ಅಂತ್ಯ, ಉಗ್ರರಿಬ್ಬರ ಹತ್ಯೆ
ಕೇರಳ ಎಸ್‌ಎಸ್‌‌ಎಲ್‌ಸಿ: ಶೇ.91.92 ಫಲಿತಾಂಶ
ಕೇರಳದಲ್ಲಿ ತೀವ್ರಗೊಂಡ ರಾಜಕೀಯ ಬಿಕ್ಕಟ್ಟು
ವರುಣ್ ಮೇಲೆ ಎನ್ಎಸ್ಎ 'ಅಸಿಂಧು': ಹಿಂತೆಗೆತ ಶಿಫಾರಸು
ಅಮರ್ ಸಿಂಗ್‌ರಿಂದ ಜೀವ ಬೆದರಿಕೆ: ಅಜಂಖಾನ್