ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ರಾಜಪಕ್ಷೆ ವಿರುದ್ಧ ಕ್ರಮಕ್ಕೆ ಮಾನವ ಹಕ್ಕು ಸಂಘಟನೆ ಆಗ್ರಹ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜಪಕ್ಷೆ ವಿರುದ್ಧ ಕ್ರಮಕ್ಕೆ ಮಾನವ ಹಕ್ಕು ಸಂಘಟನೆ ಆಗ್ರಹ
ಶ್ರೀಲಂಕಾದ ಮಾನವೀಯ ದುರಂತದಲ್ಲಿ ಪರಿಣಾಮಕಾರಿ ಮಧ್ಯಸ್ಥಿಕೆ ವಹಿಸಲು ಕೇಂದ್ರ ಸರ್ಕಾರ ವಿಫಲವಾದ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಮೊರೆ ಹೋಗಲು ಭಾರತದ ಮಾನವ ಹಕ್ಕು ರಕ್ಷಣೆ ಕಾರ್ಯಕರ್ತರು ಮುಂದಾಗಿದ್ದಾರೆ.

ದ್ವೀಪ ರಾಷ್ಟ್ರದ ವಾನ್ನಿ ಪ್ರದೇಶದಲ್ಲಿ ವಾಸಿಸುವ ತಮಿಳುನಾಗರಿಕರ ಕುಂದುಕೊರತೆಗಳ ಬಗ್ಗೆ ಕಾರ್ಯಕರ್ತರು ವಿಶ್ವಸಂಸ್ಥೆ ಗಮನಸೆಳೆಯಲಿದ್ದಾರೆ.

ನಾಗರಿಕ ಸ್ವಾತಂತ್ರ್ಯಗಳ ಜನತಾ ಒಕ್ಕೂಟವು ವಿಶ್ವಸಂಸ್ಥೆ ಭದ್ರತಾಮಂಡಳಿಯನ್ನು ಸಂಪರ್ಕಿಸಿದ್ದು, ಸಾವಿರಾರು ಶ್ರೀಲಂಕಾ ತಮಿಳರು ಬಾಂಬ್ ದಾಳಿಯಿಂದ, ಹಸಿವಿನಿಂದ ಮತ್ತು ವೈದ್ಯಕೀಯ ಸೌಲಭ್ಯದ ಕೊರತೆಯಿಂದ ಸಾವನ್ನಪ್ಪುವ ಜೀವಭಯದ ಹಿನ್ನೆಲೆಯಲ್ಲಿ ಶ್ರೀಲಂಕಾ ಕದನದಲ್ಲಿ ಮಿಲಿಟರಿ ಹಸ್ತಕ್ಷೇಪ ಆರಂಭಿಸಬೇಕೆಂದು ಕೋರಲಿದ್ದಾರೆ.

ಮಾನವೀಯತೆ ವಿರುದ್ಧ ಅಪರಾಧಕ್ಕಾಗಿ ಶ್ರೀಲಂಕಾ ಅಧ್ಯಕ್ಷ ಮಹೀಂದ್ರ ರಾಜಪಕ್ಷೆ, ರಕ್ಷಣಾ ಕಾರ್ಯದರ್ಶಿ ಗೋಟಾಬಾಯ ರಾಜಪಕ್ಷ ಮತ್ತು ಸೇನಾ ಕಮಾಂಡರ್ ವಿರುದ್ಧ ಕಾನೂನು ಕ್ರಮ ಜರುಗಿಸುವ ಪ್ರಕ್ರಿಯೆ ಆರಂಭಿಸಬೇಕೆಂದೂ ಮಾನವ ಹಕ್ಕು ಸಂಸ್ಥೆಯು ಆಗ್ರಹಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಯೋತ್ಪಾದನೆಗೆ ಅಪ್ರಾಪ್ತರ ಬಳಕೆ ಸಾಧ್ಯತೆ: ಉಜ್ವಲ್ ನಿಕಮ್
ಪ.ಬಂಗಾಳ, ಬಿಹಾರ, ರಾಜಸ್ತಾನಗಳಲ್ಲಿ ಮರುಮತದಾನ
ಹಂದಿ ಮಾಂಸಕ್ಕೆ ಬೇಡಿಕೆಯಿಲ್ಲ
ತಂದೆಯ ಹತ್ಯೆ
ಶ್ರೀಲಂಕಾ ತಮಿಳರಿಗೆ ಸಹಾಯ: ಪ್ರಧಾನಿ ಭರವಸೆ
ವಜಾ ಅಲ್ಲ, ಆಂತರಿಕ ಬದಲಾವಣೆ ಅಷ್ಟೆ: ಮೊಯ್ಲಿ