ಸಂಜಯ್ ಗಾಂಧಿಯವರು ಅನುಸರಿಸಿದ್ದ ಸಂತಾನಹರಣ ಶಸ್ತ್ರಚಿಕಿತ್ಸೆ ಕ್ರಮಗಳತ್ತ ಮಗ ವರುಣ್ ಗಾಂಧಿ ಆಸಕ್ತರಾಗಿದ್ದಾರೆಂದು ವರದಿ ಮಾಡಿ ವಿವಾದದ ಕಿಡಿ ಸ್ಫೋಟಿಸಿದ್ದ ಬ್ರಿಟನ್ ದಿನಪತ್ರಿಕೆ ಡೈಲಿ ಟೆಲಿಗ್ರಾಫ್, ಕುಟುಂಬ ಯೋಜನೆಯಲ್ಲಿ ವರುಣ್ ಮೃದು ಧೋರಣೆಗೆ ಒಲವು ತೋರಿದ್ದಾರೆಂದು ಸ್ಪಷ್ಟೀಕರಣ ಪ್ರಕಟಿಸಿದೆ.ಪಿಲಿಬಿಟ್ ಲೋಕಸಭೆ ಕ್ಷೇತ್ರದಲ್ಲಿ ವರುಣ್ ಅವರನ್ನು ಪತ್ರಿಕೆಯ ದಕ್ಷಿಣ ಏಷ್ಯಾ ಸಂಪಾದಕ ಡೀನ್ ನೆಲ್ಸನ್ ಸಂದರ್ಶನ ಮಾಡಿದ್ದ ಸಂದರ್ಭದಲ್ಲಿ, ತಾವು ತಮ್ಮ ತಂದೆಯವರ ಜನಸಂಖ್ಯೆ ನಿಯಂತ್ರಣ ನೀತಿಯನ್ನು ಕೈಗೆತ್ತಿಕೊಳ್ಳುವುದಾಗಿ ವರುಣ್ ತಿಳಿಸಿದ್ದು,