ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಲಂಕಾಗೆ ತೆರಳಿದ ಎನ್ಎಸ್ಎ, ವಿದೇಶಾಂಗ ಕಾರ್ಯದರ್ಶಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲಂಕಾಗೆ ತೆರಳಿದ ಎನ್ಎಸ್ಎ, ವಿದೇಶಾಂಗ ಕಾರ್ಯದರ್ಶಿ
PTI
ಶ್ರೀಲಂಕಾ ಸೇನೆಯು ಎಲ್ಟಿಟಿಇ ಹುಟ್ಟಡಗಿಸಿರುವುದು ಮತ್ತು ಮತ್ತು ಉಗ್ರಾಮಿ ಸಂಘಟನೆಯ ಮುಖ್ಯಸ್ಥ ವಿ. ಪ್ರಭಾಕರನ್ ಸಾವಿನ ಹಿನ್ನೆಲೆಯಲ್ಲಿ ಅಲ್ಲಿನ ಪರಿಸ್ಥಿತಿಯನ್ನು ತಿಳಿದುಕೊಳ್ಳಲು ಭಾರತವು ತನ್ನ ರಾಷ್ಟ್ರೀಯ ಭದ್ರತಾ ಸಲಹಾಗಾರ ಎಂ.ಕೆ.ನಾರಾಯಣನ್ ಹಾಗೂ ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್ ಮೆನನ್ ಅವರನ್ನು ಬುಧವಾರ ದ್ವೀಪರಾಷ್ಟ್ರಕ್ಕೆ ಕಳುಹಿಸಿದೆ.

ಲಂಕಾ ಅಧ್ಯಕ್ಷ ಮಹಿಂದ ರಾಜಪಕ್ಷೆ ಅವರು ಎಲ್ಟಿಟಿಇಯೊಂದಿಗಿನ ಹೋರಾಟ ಅಂತ್ಯಗೊಂಡಿದೆ ಎಂಬುದಾಗಿ ಔಪಚಾರಿಕವಾಗಿ ಘೋಷಿಸಿರುವ ಒಂದು ದಿನದ ಬಳಿಕ, ನಾರಾಯಣನ್ ಹಾಗೂ ಮೆನನ್ ಅವರು ಶ್ರೀಲಂಕಾದಲ್ಲಿನ ಪರಿಸ್ಥಿತಿಯ ಪರಿವೀಕ್ಷಣೆಗೆ ತೆರಳಿದ್ದಾರೆ.

ಶ್ರೀಲಂಕಾದಲ್ಲಿರುವ ತಮಿಳಿರ ಪರಿಸ್ಥಿತಿಯ ಕುರಿತು ತೀವ್ರ ಕಳವಳ ಹೊಂದಿರುವ ಭಾರತವು ಅವರಿಗೆ ಪುನರ್ವಸತಿ ಒದಗಿಸುವ ಅಗತ್ಯದ ಕುರಿತು ಒತ್ತಾಯಿಸುತ್ತಲೇ ಬಂದಿದೆ.

ತಮಿಳುನಾಡಿಗೆ ಹೊರಡುವ ಮುಂಚಿತವಾಗಿ ನಾರಾಯಣನ್ ಅವರು, ದೆಹಲಿಯಲ್ಲಿ ಮೊಕ್ಕಾಂ ಹೂಡಿರುವ ತಮಿಳ್ನಾಡು ಮುಖ್ಯಮಂತ್ರಿ ಕರುಣಾನಿಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿ ಶ್ರೀಲಂಕಾದಲ್ಲಿನ ಬೆಳವಣಿಗೆಗಳನ್ನು ವಿವರಿಸಿದರು.

ಶ್ರೀಲಂಕಾದಲ್ಲಿರುವ ತಮಿಳರ ಕುರಿತ ಕಾಳಜಿಯೇ ಭಾರತದ ಪ್ರಥಮ ಕಳವಳವಾಗಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ನಾರಾಯಣ್ ತಿಳಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತೃತೀಯರಂಗ ಸ್ಥಾಪನೆಯೊಂದು ದೊಡ್ಡ ತಪ್ಪು: ಸಿಪಿಎಂ
ಯುಪಿಎ ಅಧ್ಯಕ್ಷೆಯಾಗಿ ಸೋನಿಯಾ ಮರು ಆಯ್ಕೆ
ಪ್ರಭಾಕರನ್ ಹತ್ಯೆ: ರಾಜೀವ್ ಹತ್ಯೆ ಕೇಸು ವಜಾ?
ಸುಖೀದಾಂಪತ್ಯ ನಿಮ್ಮದಾಗಬೇಕಿದ್ದರೆ ಹೆಂಡ್ತಿ ಮಾತು ಕೇಳಿ!
ಯುಪಿಎಗೆ ಹರಿದು ಬರುತ್ತಿರುವ ಬೆಂಬಲ, 316ಕ್ಕೇರಿಕೆ
ಮಮತಾ ಪ.ಬಂನ ಮುಂದಿನ ಮು.ಮಂತ್ರಿ: ಪ್ರಣಬ್