ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಎನ್‌ಡಿಎ ಪಾಕ್ ತುಷ್ಟಿಕರಣ ಮಾಡಿತ್ತು: ಕಾಂಗ್ರೆಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎನ್‌ಡಿಎ ಪಾಕ್ ತುಷ್ಟಿಕರಣ ಮಾಡಿತ್ತು: ಕಾಂಗ್ರೆಸ್
ಬಿಜೆಯು ಪಾಕಿಸ್ತಾನದ ತುಷ್ಟಿಕರಣ ನೀತಿಯನ್ನು ಹೊಂದಿತ್ತು ಎಂದು ಸೋಮವಾರ ಆಪಾದಿಸಿರುವ ಕಾಂಗ್ರೆಸ್, ಎನ್‌ಡಿಎ ಆಡಳಿತ ವೇಳೆಯಲ್ಲಿ ಇಸ್ಲಾಮಾಬಾದ್ ವಿರುದ್ಧ ಮೆದು ಧೋರಣೆ ತಳೆದಿರುವುದಕ್ಕೆ ಹಲವು ಉದಾಹರಣೆಗಳಿವೆ ಎಂದು ಹೇಳಿದೆ.

ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಕುರಿತು ಚರ್ಚೆಯ ವೇಳೆಗೆ ಕಾಂಗ್ರೆಸ್ ಸಂಸದ ರಾಜೀವ್ ಶುಕ್ಲಾ ಅವರು ಬಿಜೆಪಿ ಮೇಲೆ ಹರಿಹಾಯ್ದರು. ಬಿಜೆಪಿಯು ಪದೇಪದೇ ಕಾಂಗ್ರೆಸ್ ಪಾಕಿಸ್ತಾನದ ವಿರುದ್ಧ ಮೆದುಧೋರಣೆ ತಳೆದಿದೆ ಎಂಬುದಾಗಿ ದೂರುತ್ತಿರುವುದಕ್ಕೆ ಪ್ರತ್ಯುತ್ತರ ನೀಡಿರುವ ಶುಕ್ಲಾ ಈ ಆಪಾದನೆ ಮಾಡಿದ್ದಾರೆ.

ಮೊಹಮ್ಮದ್ ಅಲಿ ಜಿನ್ನಾ ಅವರ ಸಮಾಧಿಗೆ ಚಾದರ್ ನೀಡಿರುವುದು, ಲಾಹೋರ್ ಬಸ್ ಸೇವೆ ಆರಂಭಿಸಿರುವುದು, ಪಾಕಿಸ್ತಾನದ ಆಗಿನ ಅಧ್ಯಕ್ಷ ಪರ್ವೇಜ್ ಮುಶರಫ್ ಅವರನ್ನು ಆಗ್ರಾಕ್ಕೆ ಆಹ್ವಾನಿಸಿ ರಾಷ್ಟ್ರವನ್ನು ಅವಮಾನಿಸಿರುವುದು, ಕಾಂಧಹಾರ್ ವಿಮಾನ ಅಪಹರಣ ವೇಳೆಗೆ ಉಗ್ರರನ್ನು ಬಿಡುಗಡೆ ಮಾಡುವ ಮೂಲಕ ಜೈಶೆ-ಇ-ಮೊಹಮ್ಮದ್ ಸಂಘಟನೆಯನ್ನು ಬಲಪಡಿಸಿರುವುದು ಸೇರಿದಂತೆ ಹಲವಾರು ಉದಾಹರಣೆಗಳಿವೆ ಎಂದು ಅವರು ನುಡಿದರು.

ಪಾಕಿಸ್ತಾನಕ್ಕೆ ಮುಂಬೈ ದಾಳಿಯ ಪುರಾವೆಗಳನ್ನು ನೀಡಿರುವ ಕುರಿತು ಟೀಕಿಸುತ್ತಾ ಬಿಜೆಪಿಯ ನಾಯಕ ಅರುಣ್ ಶೌರಿ ಮಾಡಿರುವ ಟೀಕೆಗಳಿಗೆ ಉತ್ತರಿಸಿದ ಶುಕ್ಲಾ, ಪಾಕಿಸ್ತಾನದ ವಿರುದ್ಧ ಮೆದು ಧೋರಣೆ ತಳೆದವರು ಯಾರು ಎಂಬುದು ಎಲ್ಲರಿಗೂ ಗೊತ್ತು ಎಂದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಒರಿಸ್ಸಾ: ನಕ್ಸಲ್ ಧಮನಕ್ಕೆ ಸೇನಾಮಧ್ಯಪ್ರವೇಶ?
ಮಾಯಾಗೆ ಸುಪ್ರೀಂ ನೋಟಿಸ್
ಅಮರನಾಥ ಯಾತ್ರೆ ಮುಂದಕ್ಕೆ
ಮುಸ್ಲಿಂ ಮೀಸಲಾತಿ 'ಎರಡು ಅಲಗಿನ ಕತ್ತಿ': ಖುರ್ಷಿದ್
ಮುಂಬೈ: ಶೀತಲ್ ಮಫತ್‌ಲಾಲ್ ಬಂಧನ
ಹಂದಿಜ್ವರ-ಜನರು ಭಯಪಡಬೇಕಾಗಿಲ್ಲ: ಗುಲಾಂ ನಬಿ