ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಚಿದು ಕಾಶ್ಮೀರ ಭೇಟಿ, ಭದ್ರತಾ ಪರಿಶೀಲನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚಿದು ಕಾಶ್ಮೀರ ಭೇಟಿ, ಭದ್ರತಾ ಪರಿಶೀಲನೆ
ಹಿಂಸಾಜರ್ಜರಿತ ಕಾಶ್ಮೀರಕ್ಕೆ ಗುರವಾರ ಭೇಟಿ ನೀಡಿದ ಗೃಹಸಚಿವ ಪಿ.ಚಿದಂಬರಂ ಅವರು ರಾಜ್ಯದ ಭದ್ರತಾವಿಚಾರಗಳನ್ನು ಮತ್ತು ಅಭಿವೃದ್ಧಿ ಯೋಜನೆಗಳ ಕುರಿತು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರೊಂದಿಗೆ ಚರ್ಚಿಸಿದರು.

ಎರಡು ದಿನಗಳ ಭೇಟಿಗಾಗಿ ಇಲ್ಲಿಗೆ ಆಗಮಿಸಿರುವ ಸಚಿವರು ಸ್ಥಳಕ್ಕೆ ಭೇಟಿನೀಡಿ ಭದ್ರತಾ ಸ್ಥಿತಿಯ ಪರಿಶೀಲನೆ ನಡೆಸಲಿದ್ದಾರೆ.

ಹಿರಿಯ ಅಧಿಕಾರಿಗಳ ತಂಡದೊಂದಿಗೆ ಆಗಮಿಸಿರುವ ಚಿದಂಬರಂ ಅವರು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸೇನಾ ಸ್ಥಿತಿಯನ್ನು ಪರಾಮರ್ಷೆ ಮಾಡಲು ಏಕೀಕೃತ ಕಮಾಂಡನ್ನು ಭೇಟಿಮಾಡಲಿದ್ದಾರೆ.

ನೂತನ ಸರ್ಕಾರದಲ್ಲಿ ಗೃಹಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಥಮಬಾರಿಗೆ ಕಾಶ್ಮೀರಕ್ಕೆ ಭೇಟಿ ನೀಡಿರುವ ಸಚಿವರು ಸೇನಾಧಿಕಾರಿಗಳಿಂದ ಅಕ್ರಮ ನುಸುಳುವಿಕೆಯ ಕುರಿತು ವರದಿಗಳನ್ನು ಪಡೆಯಲಿದ್ದಾರೆ.

ಇತ್ತೀಚಿನ ದಿವಸಗಳಲ್ಲಿ ಸುಮಾರು 200 ಉಗ್ರರು ರಾಜ್ಯದೊಳಕ್ಕೆ ನುಸುಳುವಲ್ಲಿ ಸಫಲರಾಗಿದ್ದಾರೆ ಎಂದು ರಾಜ್ಯ ಸರ್ಕಾರದ ವರದಿ ತಿಳಿಸಿದೆ.

ಇದೇವೇಳೆ ಜೂನ್ 15ರಿಂದ ಆರಂಭಗೊಳ್ಳಲಿರುವ ಅಮರನಾಥ್ ಯಾತ್ರೆಗೆ ಭತ್ರತಾ ವ್ಯವಸ್ಥೆಯ ಕುರಿತ ಚರ್ಚೆಯೂ ನಿಗದಿಯಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕೋಮುವಾದಿಗಳಿಗೆ ಜನತೆ ಉತ್ತರಿಸಿದ್ದಾರೆ: ಸೋನಿಯಾ
ಆಜೀವ ರೈಲುಪ್ರಯಾಣಕ್ಕೆ ಲಾಲೂಗೆ ಉಚಿತ ಪಾಸು
ಕಾನ್ಪುರ: ಕಾಲೇಜಲ್ಲಿ ಜೀನ್ಸ್, ಸ್ಲೀವ್‌ಲೆಸ್ ಧರಿಸುವಂತಿಲ್ಲ!
ನರಹಂತಕ ಕಸಬ್‌ಗೆ ಸರಿಯಾಗಿ ವರ್ತಿಸಲು ತಾಕೀತು
ಬಿಜೆಪಿಯೊಳಗೆ ಆಳಗೊಳ್ಳುತ್ತಿರುವ ಕಂದಕ
ಚಿದಂಬರಂಗೆ ಹೊಸ ಫೋರ್ಡ್ ಫಿಯೆಸ್ಟಾ ಕಾರು