ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಇನ್ನೊಂದು 26/11ಕ್ಕೆ ನಾವು ಸಿದ್ಧರಿಲ್ಲ: ರಾಮ್ ಪ್ರಧಾನ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇನ್ನೊಂದು 26/11ಕ್ಕೆ ನಾವು ಸಿದ್ಧರಿಲ್ಲ: ರಾಮ್ ಪ್ರಧಾನ್
ಕಳೆದ ನವೆಂಬರ್ ತಿಂಗಳ 26ನೆ ತಾರೀಕಿನಂದು ನಡೆದಂತಹ ಭಯೋತ್ಪಾದನಾ ಘಟನೆಗಳೇನಾದರೂ ಮರುಕಳಿಸಿದರೆ ಅದನ್ನು ಎದುರಿಸಲು ನಾವು ಸಿದ್ಧರಿಲ್ಲ ಎಂಬುದಾಗಿ ರಾಮ್ ಪ್ರಧಾನ್ ಹೇಳಿದ್ದಾರೆ. ಮುಂಬೈಯಲ್ಲಿ ನಡೆದ ಉಗ್ರರ ದಾಳಿವೇಳೆ ಪೊಲೀಸರಿಂದ ಆಗಿರುವ ಲೋಪಗಳನ್ನು ತನಿಖೆ ನಡೆಸಲು ಸರ್ಕಾರವು ಸಮಿತಿಯೊಂದನ್ನು ನೇಮಿಸಿದ್ದು ರಾಮ್‌ಪ್ರಧಾನ್ ಅವರು ಸಮಿತಿಯ ಅಧ್ಯಕ್ಷರಾಗಿದ್ದಾರೆ.

ಸಿಎನ್ಎನ್-ಐಬಿಎನ್ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಅವರು ಇನ್ನೊಂದು ಇದಕ್ಕಿಂತಲೂ ಗಂಭೀರ ಸ್ವರೂಪದ ದಾಳಿ ನಡೆಯುವ ಕುರಿತು ಗುಪ್ತಚರ ಮಾಹಿತಿಗಳಿವೆ. ಆದರೆ ಅಂತಹ ಪರಿಸ್ಥಿತಿಗಳನ್ನು ಎದುರಿಸಲು ನಾವು ಸಿದ್ಧರಾಗಿದ್ದೇವೆ ಎಂದು ನನಗನಿಸುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಅಭಿಪ್ರಾಯಿಸಿದ್ದಾರೆ.

ತಾವು ಸಲ್ಲಿಸಿದ ವರದಿಯ ಒಂದು ಭಾಗವನ್ನೂ ಸರ್ಕಾರ ಸದನದಲ್ಲಿ ಮಂಡಿಸಿಲ್ಲ. ಸರ್ಕಾರವು ಕ್ರಮಕೈಗೊಳ್ಳಲು ಉದ್ದೇಶಿಸಿರುವ ಭಾಗವನ್ನು ಮಂಡಿಸಿದ ಅದನ್ನು ಸರ್ಕಾರವು ಎಟಿಆರ್(ಕಾರ್ಯಕೈಗೊಳ್ಳಬೇಕಿರುವ ವರದಿ) ಎಂದು ಕರೆದಿದೆ ಎಂದವರು ನುಡಿದರು.

"ವ್ಯವಸ್ಥೆಯಲ್ಲಿ ಎಲ್ಲವೂ ಹೇಗಿರಬೇಕಿತ್ತೋ ಹಾಗಿಲ್ಲ. ಎಲ್ಲವೂ ಸರಿಯಾಗಿದೆ ಅಥವಾ ಎಲ್ಲವೂ ಸರಿಯಾಗಿಲ್ಲ ಎಂಬುದಾಗಿ ನಾನು ಸರ್ಟಿಫಿಕೇಟ್ ನೀಡುವುದಿಲ್ಲ. ಆದರೆ ಆಗಬೇಕಿರುವುದು ತುಂಬ ಇದೆ. ಎಟಿಆರ್‌ನಲ್ಲಿ ಹೇಳಲಾಗಿರುವ ವಿಚಾರಗಳನ್ನು ಶ್ರೇಷ್ಠ ಮಟ್ಟದಲ್ಲಿ ಮತ್ತು ಶೀಘ್ರವಾಗಿ ಅಳವಡಿಸದೇ ಇದ್ದಲ್ಲಿ ಸದ್ಯವೇ ನಾವು ಇನ್ನೂ ಗಂಭೀರವಾದ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು. ನಾವು ಇದನ್ನು ಎದುರಿಸಲು ಸಿದ್ಧವಾಗಿದ್ದೇವೆ ಎಂದು ನನಗನಿಸುವುದಿಲ್ಲ" ಎಂಬುದಾಗಿ ಅವರು 26/11ರಂತಹ ಘಟನೆಗಳನ್ನು ಎದುರಿಸಲು ವ್ಯವಸ್ಥೆಗಳು ಸೂಕ್ತವಾಗಿವೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಅಭಿಪ್ರಾಯಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನಕ್ಸಲರಿಗೆ ಮಮತಾ ಸಪೋರ್ಟ್: ಸಿಪಿಎಂ ಆರೋಪ
ಗುಜರಾತ್ ಉಗ್ರನಿಗ್ರಹ ಬಿಲ್ ಮತ್ತೆ ವಾಪಾಸ್
ಪೊಲೀಸರ ಗುಂಡಿಗೆ ಕಸಬ್, ಇಸ್ಮಾಯಿಲ್ ಹಿಮ್ಮೆಟ್ಟಿದ್ದರು
ಹಿಂದುತ್ವವನ್ನು ಬಿಡುವ ಪ್ರಶ್ನೆಯೇ ಇಲ್ಲ: ವೆಂಕಯ್ಯ ನಾಯ್ಡು
ಯುವರಾಜ ರಾಹುಲ್‌ಗಿಂದು ಹುಟ್ಟುಹಬ್ಬ ಸಂಭ್ರಮ
ಸಿಬಿಐ ದಾಳಿ: ಪದಂಸಿನ್ನಾ ಮನೆಯಿಂದ ಶಸ್ತ್ರಾಸ್ತ್ರ ವಶ