ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ವಿಜಯಕುಮಾರ್‌ಗೆ ದೆಹಲಿ ಪೊಲೀಸ್ ಮುಖ್ಯಸ್ಥರ ಪಟ್ಟ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಜಯಕುಮಾರ್‌ಗೆ ದೆಹಲಿ ಪೊಲೀಸ್ ಮುಖ್ಯಸ್ಥರ ಪಟ್ಟ?
ಕಾಡುಗಳ್ಳ ವೀರಪ್ಪನ್ ಹತ್ಯೆಯಲ್ಲಿ ಬಿರುದಾಂಕಿತರಾದ ಪೊಲೀಸ್ ಅಧಿಕಾರಿ ಕೆ. ವಿಜಯಕುಮಾರ್ ಅವರು ದೆಹಲಿ ಪೊಲೀಸ್ ಆಯುಕ್ತರಾದ ವೈ.ಎಸ್. ದಡವಾಲ್ ಅವರ ಉತ್ತರಾಧಿಕಾರಿ ಪಟ್ಟದ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ದಡವಾಲ್ ಅವರು ತಮ್ಮ ಎರಡು ವರ್ಷಗಳ ಅಧಿಕಾರಾವಧಿಯನ್ನು ಜು.25ರಂದು ಮುಗಿಸಲಿದ್ದಾರೆ.

ಪ್ರತಿಷ್ಠಿತ ಹುದ್ದೆಗೆ ನೇಮಕವನ್ನು ಮುಂದಿನ ತಿಂಗಳು ಕೈಗೊಂಡರೂ, ತಮಿಳುನಾಡು ಕೇಡರ್‌ನ 1975ರ ಬ್ಯಾಚ್ ಐಪಿಎಸ್ ಅಧಿಕಾರಿ ವಿಜಯಕುಮಾರ್ ಆಯುಕ್ತರ ಹುದ್ದೆಗೆ ಮುಂಚೂಣಿಯಲ್ಲಿದ್ದು, ನಗರದ ಹಿರಿಯ ಪೊಲೀಸ್ ಅಧಿಕಾರಿಗಳಾದ ಬಂಧೀಖಾನೆ ಪ್ರಧಾನ ನಿರ್ದೇಶಕ ಬಿ.ಕೆ. ಗುಪ್ತಾ ಮತ್ತು ವಿಶೇಷ ಆಯುಕ್ತ ನೀರಜ್‌ಕುಮಾರ್ ಅವರ ಹೆಸರುಗಳು ಕೂಡ ಕೇಳಿಬರುತ್ತಿವೆ.

ವಿಜಯಕುಮಾರ್ ಪ್ರಸಕ್ತ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಆಯುಕ್ತರ ಹುದ್ದೆಗೆ ಅವರು ಆಯ್ಕೆಯಾದರೆ, ಗಂಧದ ಮರದ ಕಳ್ಳಸಾಗಣೆದಾರ ವೀರಪ್ಪನ್‌ನನ್ನು ನಿವಾರಿಸುವ ಮ‌ೂಲಕ ಸುದ್ದಿಪತ್ರಿಕೆಯ ಮುಖಪುಟಗಳಲ್ಲಿ ರಾರಾಜಿಸಿದ ತಮಿಳುನಾಡು ಕೇಡರ್ ಪೊಲೀಸ್ ಅಧಿಕಾರಿಯು ದೆಹಲಿ ಪೊಲೀಸ್ ಆಯುಕ್ತರ ಹುದ್ದೆಯನ್ನು ವಹಿಸಿಕೊಂಡ ರಾಜ್ಯದ ಹೊರಗಿನ ವ್ಯಕ್ತಿಗಳಲ್ಲಿ ಎರಡನೆಯವರೆನಿಸಲಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವೀರಪ್ಪನ್, ದಡವಾಲ್, Vijay Kumar, Dadwal, Veerappan Commissioner
ಮತ್ತಷ್ಟು
ಪುಣೆಗೆ ತಲುಪಿದ ಹಂದಿಜ್ವರ
ಅಮರನಾಥ ಯಾತ್ರೆ: ಸಾವಿನ ಸಂಖ್ಯೆ 5ಕ್ಕೆ ಏರಿಕೆ
ಲಖ್ವಿ, ಹಫೀಜ್ ಸಹಿತ 22 ಪಾಕಿಗಳ ವಿರುದ್ಧ ವಾರಂಟ್
ಜಾತ್ಯತೀತ ಕಾಂಗ್ರೆಸ್‌ಗೆ ಜಾತಿ, ಧರ್ಮವೇ ಮಾನದಂಡ
ಉತ್ತರಖಂಡ್ ಸಿಎಂ ಖಂಡೂರಿ ರಾಜೀನಾಮೆ
ನಕ್ಸಲರು ಮಾತುಕತೆಗೆ ಸಿದ್ಧ, ಕದನ ವಿರಾಮಕ್ಕೆ ಕರೆ