ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಗಡಿಯಲ್ಲಿ ಗುಂಡಿನ ಕಾಳಗ: ಪಾಕ್ ದಾಳಿಗೆ ಸೈನಿಕ ಬಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗಡಿಯಲ್ಲಿ ಗುಂಡಿನ ಕಾಳಗ: ಪಾಕ್ ದಾಳಿಗೆ ಸೈನಿಕ ಬಲಿ
ಜಮ್ಮು-ಕಾಶ್ಮೀರದ ಪೂಂಜ್ ಜಿಲ್ಲೆಯ ಗಡಿಭಾಗದಲ್ಲಿ ಪಾಕಿಸ್ತಾನ ಭಾರತೀಯ ಸೇನೆ ಮೇಲೆ ಗುಂಡಿನ ದಾಳಿ ನಡೆಸಿದ ಪರಿಣಾಮ ಸೈನಿಕನೊಬ್ಬ ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿರುವುದಾಗಿ ಆರ್ಮಿ ಅಧಿಕಾರಿಗಳು ತಿಳಿಸಿದ್ದಾರೆ.

ಪೂಂಜ್ ಗಡಿಯಲ್ಲಿ ಮತ್ತೆ ಪಾಕ್ ಕದನ ವಿರಾಮವನ್ನು ಉಲ್ಲಂಘಿಸಿ, ಭಾರತೀಯ ಸೇನೆ ಮೇಲೆ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಭಾರತದ ಸೈನಿಕ ಮೊಹೀಂದರ್ ಸಿಂಗ್ ಸಾವನ್ನಪ್ಪಿದ್ದು, ಮತ್ತೊಬ್ಬ ಸೈನಿಕ ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.

ಭಾನುವಾರ ಸಂಜೆ ಭಾರತೀಯ ಗಡಿಭಾಗದಿಂದ ಅಕ್ರಮವಾಗಿ ನುಸುಳಲು ಯತ್ನಿಸಿದ ಸಂದರ್ಭದಲ್ಲಿ ಗುಂಡಿನ ದಾಳಿ ನಡೆಸಿದ್ದು, ಪಾಕ್ ಆರ್ಮಿ ಕೂಡ ಪ್ರತಿದಾಳಿ ನಡೆಸಿರುವುದಾಗಿ ಆರ್ಮಿ ಅಧಿಕಾರಿಗಳು ತಿಳಿಸಿದ್ದಾರೆ. ಪದೇ ಪದೇ ಭಾರತ ಮತ್ತು ಪಾಕ್ ಗಡಿಯಲ್ಲಿ ಪಾಕ್ ಕದನ ವಿರಾಮವನ್ನು ಉಲ್ಲಂಘಿಸುತ್ತಿರುವ ಬಗ್ಗೆ ಪಾಕಿಸ್ತಾನದಿಂದ ವಿವರಣೆ ಕೇಳಲಾಗುವುದು ಎಂದು ಹೇಳಿದರು.

ಪ್ರಸಕ್ತ ಸಾಲಿನಲ್ಲಿ ಪಾಕಿಸ್ತಾನ ಮೂರನೇ ಬಾರಿಗೆ ಕದನ ವಿರಾಮವನ್ನು ಉಲ್ಲಂಘಿಸುತ್ತಿರುವುದಾಗಿ ಆರ್ಮಿ ಅಧಿಕಾರಿಗಳು ವಿವರಿಸಿದ್ದು, ಗಡಿಭಾಗದಲ್ಲಿ ಬಿಗಿ ಭದ್ರತೆಯೊಂದಿಗೆ ಕಾವಲು ಕಾಯಲಾಗುತ್ತಿದೆ ಎಂದು ತಿಳಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹಲ್ಲೆ ಪ್ರಕರಣ: ರಾಜ್ ಠಾಕ್ರೆ ಕಲ್ಯಾಣ್ ಕೋರ್ಟ್‌ಗೆ ಶರಣು
ಸಮುದ್ರ ಮೇಲ್ಸೇತುವೆ ಜೂನ್ 30ರಂದು ಉದ್ಘಾಟನೆ
ಸಲಿಂಗರತಿ ಸಕ್ರಮಕ್ಕೆ ಧಾರ್ಮಿಕ ನಾಯಕರು ಕಿಡಿ
ಹಂದಿಜ್ವರ ಪೀಡಿತರ ಸಂಖ್ಯೆ 95
ಶಿವರಾಜ್ ಪಾಟೀಲ್‌ಗೆ ರಾಜ್ಯಪಾಲ ಹುದ್ದೆ?
ದೆಹಲಿಯನ್ನೇ ಮರೆತ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ