ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮಾಯಾವತಿ ಪ್ರತಿಮೆ ವಿರುದ್ಧ ಸುಪ್ರೀಂ ಶೋಕಾಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾಯಾವತಿ ಪ್ರತಿಮೆ ವಿರುದ್ಧ ಸುಪ್ರೀಂ ಶೋಕಾಸ್
ರಾಜ್ಯದ ಅಭಿವೃದ್ಧಿಗೆ ಮೀಸಲಾದ ಹಣವನ್ನು ಮುಖ್ಯಮಂತ್ರಿಗಳ ಪ್ರತಿಮೆಗಳ ನಿರ್ಮಾಣಕ್ಕೆ ದುರ್ಬಳಕೆ ಮಾಡಿಕೊಂಡ ಮಾಯಾವತಿ ನೇತೃತ್ವದ ಉತ್ತರಪ್ರದೇಶದ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಶೋಕಾಸ್ ನೋಟಿಸ್ ನೀಡಿದೆ. ನೋಟಿಸಿಗೆ ನಾಲ್ಕು ವಾರಗಳಲ್ಲಿ ಉತ್ತರಿಸುವಂತೆ ಅದು ಸರ್ಕಾರಕ್ಕೆ ತಿಳಿಸಿದ್ದು, ಮುಖ್ಯಮಂತ್ರಿ ಮಾಯಾವತಿ ಅವರಿಗೆ ಕೂಡ ನೋಟಿಸ್ ನೀಡಿದೆ.

ಸ್ವಂತ ಪ್ರತಿಮೆಗಳ ನಿರ್ಮಾಣಕ್ಕೆ 1000 ಕೋಟಿ ರೂ. ಖರ್ಚು ಮಾಡಿದ ಮಾಯಾವತಿ ಅವರನ್ನು ಕೇಂದ್ರ ಗೃಹಸಚಿವ ಚಿದಂಬರಂ ಕೂಡ ಭಾನುವಾರ ರಾತ್ರಿ ತರಾಟೆಗೆ ತೆಗೆದುಕೊಂಡಿದ್ದರು. ಈ ಮೊತ್ತವನ್ನು ಜನರಿಗೆ ಮ‌ೂಲಭೂತ ಸೌಲಭ್ಯ ಕಲ್ಪಿಸಿ ಬಡತನ ನಿವಾರಣೆಗೆ ಬಳಸಬಹುದಿತ್ತು ಎಂದು ಹೇಳಿದ್ದಾರೆ.

ಶಿವಗಂಗಾದಲ್ಲಿ ತಮ್ಮ ಕ್ಷೇತ್ರದ ಮತದಾರರ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಭಾರತದ ರಾಜಕೀಯದಲ್ಲಿ ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಬೇರೊಂದಿಲ್ಲವೆಂದು ಹೇಳಿದ್ದಾರೆ. ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡುತ್ತದೆಂಬ ಶಂಕೆಯ ಮೇಲೆ ನಿಗದಿಗಿಂತ ಮುಂಚೆಯೇ ದಲಿತ ನಾಯಕರ ಪ್ರತಿಮೆಗಳು ಮತ್ತು ಉದ್ಯಾನಗಳ ಉದ್ಘಾಟನೆ ಮಾಡಿದ್ದಕ್ಕಾಗಿ ಮಾಯಾವತಿ ಪ್ರತಿಪಕ್ಷಗಳ ಟೀಕಾಪ್ರವಾಹಕ್ಕೆ ಗುರಿಯಾದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಾಯಾಪ್ರತಿಮೆ ಸ್ಥಾಪನೆಗೆ ಕಿಡಿಕಾರಿದ ಚಿದ್ದು
ರಾಷ್ಟ್ರಪತಿ, ಪಿಎಂ, ಸಂಸತ್ ವಿದ್ಯುತ್ ವೆಚ್ಚ 14 ಕೋಟಿ!
ನಿಲ್ಲದ ಜನಾಂಗೀಯ ಹಲ್ಲೆ: ಸುಪ್ರೀಂ ಕೇಂದ್ರಕ್ಕೆ ತರಾಟೆ
ಗಡಿಯಲ್ಲಿ ಗುಂಡಿನ ಕಾಳಗ: ಪಾಕ್ ದಾಳಿಗೆ ಸೈನಿಕ ಬಲಿ
ರಾಜ್ ಠಾಕ್ರೆಗೆ ಜು.13ರವರೆಗೆ ನ್ಯಾಯಾಂಗ ಬಂಧನ
ಸಮುದ್ರ ಮೇಲ್ಸೇತುವೆ ಜೂನ್ 30ರಂದು ಉದ್ಘಾಟನೆ