ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕಡತ ನಾಪತ್ತೆ: ಸಿಬಿಐ ತನಿಖೆಗೆ ಮಾಯಾ ಶಿಫಾರಸ್ಸು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಡತ ನಾಪತ್ತೆ: ಸಿಬಿಐ ತನಿಖೆಗೆ ಮಾಯಾ ಶಿಫಾರಸ್ಸು
ಬಾಬ್ರಿ ಮಸೀದಿ ಮತ್ತು ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದ 23 ಕಡತಗಳು ಕಾಣೆಯಾಗಿರುವ ಪ್ರಕರಣವನ್ನು ಉತ್ತರಪ್ರದೇಶ ಸರ್ಕಾರವು ಸಿಬಿಐ ತನಿಖೆಗೊಪ್ಪಿಸಿದೆ.

ಇದು ಗಂಭೀರ ಪ್ರಕರಣವಾಗಿರುವುದರಿಂದ ಸಿಬಿಐ ತನಿಖೆಗೆ ಶಿಫಾರಸ್ಸು ಮಾಡಲಾಗಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಹೇಳಿದ್ದಾರೆ.

ರಾಮಜನ್ಮಭೂಮಿ ವಿವಾದದ ವಿಚಾರಣೆ ನಡೆಸುತ್ತಿರುವ ಅಲಹಾಬಾದ್ ಹೈಕೋರ್ಟ್, ಉತ್ತರಪ್ರದೇಶದ ಮುಖ್ಯಕಾರ್ಯದರ್ಶಿ ಅತುಲ್‌ಕುಮಾರ್ ಗುಪ್ತಾ ಅವರನ್ನು ಕರೆಸಿ ವಿವಾದಿತ ಸ್ಥಳದ ಕಡತಗಳು ಎಲ್ಲಿಹೋದವು ಮತ್ತು ಹೇಗೆ ಕಾಣೆಯಾದವು ಎಂದು ಪ್ರಶ್ನಿಸಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರವು ಪ್ರಕರಣದ ಸಿಬಿಐ ತನಿಖೆಗೆ ಶಿಫಾರಸ್ಸು ಮಾಡಿದೆ.

ಬಾಬ್ರಿ ಮಸೀದಿ ಕ್ರಿಯಾ ಸಮಿತಿಯ ಪರ ವಕೀಲ ಜಫರ್ಯಾಬ್ ಗಿಲಾನಿ ಅವರು ಕಾಣೆಯಾಗಿರುವ ಕಡತಗಳು ಜಮೀನು ವಿವಾದಕ್ಕೆ ಸಂಬಂಧಿಸಿದ ಪ್ರಮುಖ ದಾಖಲೆಗಳನ್ನು ಹೊಂದಿದ್ದವು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತಾಲಿಬಾನ್ ದಾಳಿಗೆ 6 ಭಾರತೀಯರು ಸೇರಿ 18 ಬಲಿ
ಬಲಿಪಶುವಿನ ಮೈಯಲ್ಲಿ ಗಾಯವಿಲ್ಲದಿದ್ದರೂ ಅತ್ಯಾಚಾರ ಸಾಧ್ಯ
ಮುಂಗಾರು ಮಳೆ ಚುರುಕುಗೊಳ್ಳಲಿದೆ: ಪವಾರ್ ವಿಶ್ವಾಸ
ಇಂದಿನಿಂದಿ ಸಿಪಿಎಂ ಕೇಂದ್ರ ಸಮಿತಿ ಸಭೆ
ಕಸಬ್‌ಗೆ ಪಾಕ್ ನೌಕಾದಳದ ತರಬೇತಿ: ವರದಿ
ಎಚ್ಐವಿ ಪೀಡಿತ ಮಕ್ಕಳಿಗೆ ಶಾಲೆಯಿಂದ ಗೇಟ್‌ಪಾಸ್!