ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಪಾಲಿಟ್‌ಬ್ಯೂರೊದಿಂದ ಅಚ್ಯುತಾನಂದನ್‌ಗೆ ಕೊಕ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಲಿಟ್‌ಬ್ಯೂರೊದಿಂದ ಅಚ್ಯುತಾನಂದನ್‌ಗೆ ಕೊಕ್
ಕೇರಳ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಅವರನ್ನು ಸಿಪಿಐ(ಎಂ) ಪಾಲಿಟ್‌ಬ್ಯೂರೋದಿಂದ ವಜಾ ಮಾಡಲಾಗಿದೆ. ಪಕ್ಷದ ಕೇರಳ ಘಟಕದಲ್ಲಿ ಬಿಕ್ಕಟ್ಟನ್ನು ಅಂತಿಮಗೊಳಿಸುವ ಮುಂಚಿತವಾಗಿ ಪಕ್ಷವು ಈ ಕ್ರಮಕೈಗೊಂಡಿದೆ.

ಅದಾಗ್ಯೂ, ಅಚ್ಯುತಾನಂದನ್ ಅವರು ಕೇರಳ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಬಹುಕೋಟಿ ಎಸ್ಎನ್‌ಸಿ ಲವಲಿನ್ ಹಗರಣದಲ್ಲಿ ಪಾಲ್ಗೊಂಡಿದ್ದಾರೆಂಬ ಆರೋಪ ಹೊತ್ತಿರುವ ಅಚ್ಯುತಾನಂದನ್ ಅವರೊಂದಿಗೆ ಗುದ್ದಾಟಕ್ಕಿಳಿದಿರುವ ಪಿನರಾಯಿ ವಿಜಯನ್ ಅವರು ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ಮುಂದುವರಿಯಲಿದ್ದಾರೆ.

ಕೇರಳ ಘಟಕದಲ್ಲಿರುವ ಪಕ್ಷೀಯ ಭಿನ್ನಮತದ ಅಗ್ನಿಯನ್ನು ಶಮನಗೊಳಿಸುವ ನಿಟ್ಟಿನಲ್ಲಿ ಶನಿವಾರ ಸಾಯಂಕಾಲ ನಡೆದ ಸಭೆಯಲ್ಲಿ ಅಚ್ಯುತಾನಂದನ್ ಅವರನ್ನು ವಜಾಗೊಳಿಸುವ ಶಿಫಾರಸ್ಸನ್ನು ಮಂಡಿಸಲಾಗಿತ್ತು.

ಲವಲಿನ್ ಹಗರಣವು ಪಕ್ಷದ ಘನತೆಗೆ ಹಾನಿಯುಂಟಾಗಿದೆ ಎಂದು ಅಚ್ಯುತಾನಂದನ್ ಹೇಳಿದ್ದರು. ಇದೇ ವೇಳೆ, ಸಿಎಂ ಹೇಳಿಕೆಯು ಪಕ್ಷದ ಸದಸ್ಯರಿಗೆ ನೋವುಂಟುಮಾಡಿದೆ ಎಂದು ಹೇಳಿದ್ದು, ಅವರ ವಿರುದ್ಧ ಕ್ರಮಕೈಗೊಳ್ಳಬೇಕೆಂಬ ಕರೆನೀಡಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚತ್ತೀಸ್‌ಗಢ: ನಕ್ಸಲರ ದಾಳಿಗೆ 26 ಪೊಲೀಸರು ಬಲಿ
ದಲಿತನನ್ನು ವರಿಸಿದ ಮಗಳನ್ನು ಕತ್ತು ಹಿಸುಕಿದ ತಂದೆ!
ಟಿಡಿಪಿ ಶಾಸಕನ ಮೇಲಿನ ಕಿರುಕುಳ ಆರೋಪ ಸುಳ್ಳಲ್ಲ
ದೆಹಲಿ: ಮತ್ತೊಂದು ಮೇಲ್ಸೇತುವೆ ಕುಸಿತ, 5 ಸಾವು
ಮಲ್ಯ ಸಲಹೆಯನ್ನು ನಿರಾಕರಿಸಿದ ಬಿಜೆಪಿ
ಚಂಢೀಗಢ: ಮಹಿಳಾ ಸೇನಾ ಅಧಿಕಾರಿಯ ವಜಾ