ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಜೈಲಿನಲ್ಲಿ ಆತ್ಮಹತ್ಯೆ ಬೆದರಿಕೆ ಹಾಕಿದ ಸಾಧ್ವಿ ಪ್ರಜ್ಞಾ ಸಿಂಗ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜೈಲಿನಲ್ಲಿ ಆತ್ಮಹತ್ಯೆ ಬೆದರಿಕೆ ಹಾಕಿದ ಸಾಧ್ವಿ ಪ್ರಜ್ಞಾ ಸಿಂಗ್
PTI
ಜೈಲಿನಲ್ಲಿ ತನ್ನನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತದೆ ಎಂದು ಆರೋಪಿಸಿರುವ ಮಾಲೆಗಾಂವ್ ಸ್ಫೋಟ ಪ್ರಕರಣ ಪ್ರಮುಖ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರು, ತಾನು ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಾರೆ.

ಮಾಧ್ಯಮಗಳಿಗೆ ಪತ್ರಬರೆದಿರುವ ಸಿಂಗ್ "ಪೊಲೀಸರು, ಆಸ್ಪತ್ರೆ ಹಾಗೂ ಜೈಲಿನ ಅಧಿಕಾರಿಗಳು ತನ್ನನ್ನು ನಡೆಸಿಕೊಳ್ಳುವ ರೀತಿಯಿಂದ ರೋಸಿಹೋಗಿದ್ದು, ತನ್ನನ್ನು ಇರಿಸಿರುವ ಬೈಕುಲ್ಲಾ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.

ಅನಾರೋಗ್ಯಪೀಡಿತಳಾಗಿದ್ದ ತನ್ನನ್ನು ಜೆ.ಜೆ. ಆಸ್ಪತ್ರೆಗೆ ಅಂಬ್ಯುಲೆನ್ಸ್ ಬದಲಿಗೆ ಪೊಲೀಸ್ ಜೀಪಿನಲ್ಲಿ ಕರೆದೊಯ್ಯಲಾಯಿತು ಎಂದು ಅವರು ಜುಲೈ 11ರ ದಿನಾಂಕದ ಪತ್ರದಲ್ಲಿ ದೂರಿದ್ದಾರೆ.

"ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್‌ನಂತಹ ಉಗ್ರನನ್ನು ಜೈಲಿನಲ್ಲಿ ವಿಐಪಿಯಂತೆ ನಡೆಸಿಕೊಳ್ಳಲಾಗುತ್ತದೆ. ಆದರೆ ಪ್ರಜ್ಞಾರನ್ನು ಅವರ ಹಿಂದುತ್ವ ಸಿದ್ಧಾಂತಕ್ಕಾಗಿ ಶಿಕ್ಷಿಸಲಾಗುತ್ತಿದ್ದು ಇದು ವಿಚಿತ್ರವಾಗಿದೆ" ಎಂದು ಪ್ರಜ್ಞಾರ ವಕೀಲ ನವೀನ್ ಕೋಮಲ್ ಹೇಳಿದ್ದಾರೆ.

ತನಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲದಿದ್ದರೂ, ತನ್ನನ್ನು ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್)ವು ತಪ್ಪಾಗಿ ಸಿಲುಕಿಸಿದೆ ಎಂದೂ ಸಾಧ್ವಿ ಆಪಾದಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದೆಹಲಿ ಮೆಟ್ರೋ ಮತ್ತೊಂದು ಅವಘಡ: ಉರುಳಿಬಿದ್ದ ಕ್ರೇನುಗಳು
ದೆಹಲಿ ಮೆಟ್ರೋ ಮುಖ್ಯಸ್ಥರ ರಾಜೀನಾಮೆ ತಿರಸ್ಕೃತ
ಬಗ್ಲಿಹಾರ್ ವಿದ್ಯುತ್ ಘಟಕ ಸ್ಫೋಟಕ್ಕೆ ಉಗ್ರರಿಗೆ ತರಬೇತಿ
ಬಸ್-ಲಾರಿ ಢಿಕ್ಕಿ: 11 ಸಾವು
ಜ್ಯೋತಿ ಬಸು ಆಸ್ಪತ್ರೆಗೆ ದಾಖಲು
ಪಾಲಿಟ್‌ಬ್ಯೂರೊದಿಂದ ಅಚ್ಯುತಾನಂದನ್‌ಗೆ ಕೊಕ್