ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಶಿಕ್ಷಣದಿಂದ ಕೋಮು ಓಲೈಕೆ, ರಾಜಕೀಯ ದೂರವಿಡಿ: ಬಿಜೆಪಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶಿಕ್ಷಣದಿಂದ ಕೋಮು ಓಲೈಕೆ, ರಾಜಕೀಯ ದೂರವಿಡಿ: ಬಿಜೆಪಿ
ಶಿಕ್ಷಣದಿಂದ 'ಕೋಮುವಾದ ಮತ್ತು ರಾಜಕೀಯ'ವನ್ನು ದೂರವಿಡಬೇಕು ಎಂದು ಹೇಳಿದ ಬಿಜೆಪಿ, ಅಧ್ಯಯನವನ್ನು 'ಮಾನವೀಯಗೊಳಿಸಬೇಕು' ಮತ್ತು ಅದು ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯ ಮತ್ತು ಸಾಂಸ್ಕೃತಿಕ ಹೆಮ್ಮೆಯನ್ನು ಮೂಡಿಸುವಂತೆ ಮಾಡಬೇಕು ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವನ್ನು ಒತ್ತಾಯಿಸಿತು.

ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಅನುದಾನ ಕುರಿತು ಲೋಕಸಭೆಯಲ್ಲಿ ಬುಧವಾರ ಚರ್ಚೆ ಆರಂಭಿಸಿದ ಮಾಜಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ, ಬಿಜೆಪಿಯ ಮುರಳಿ ಮನೋಹರ ಜೋಷಿ, ತಮ್ಮ ಉತ್ತರಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಕಾಂಗ್ರೆಸಿನ ಅರ್ಜುನ್ ಸಿಂಗ್ ವಿರುದ್ಧ ಕೆಂಡ ಕಾರಿ, ಆತ 'ಕೋಮುವಾದದ ಅಜೆಂಡಾ'ವನ್ನು ಅನುಸರಿಸಿ ಅಲ್ಪಸಂಖ್ಯಾತರನ್ನು ಓಲೈಸಲು ಪ್ರಯತ್ನಿಸಿದರು ಎಂದು ಆರೋಪಿಸಿದರು.

ನಿಮ್ಮ ಹಿಂದಿನ ಸಚಿವರು (ಅರ್ಜುನ್ ಸಿಂಗ್) ಶಿಕ್ಷಣದಲ್ಲಿ ಕೋಮು ಶಕ್ತಿಗಳನ್ನು ಅಳವಡಿಸಿದರು, ಅಲ್ಪಸಂಖ್ಯಾತರು ಹೆಚ್ಚಾಗಿ ವಾಸಿಸುತ್ತಿರುವ ಪ್ರದೇಶಗಳಲ್ಲಿ ಶಾಲೆಗಳನ್ನು ತೆರೆದು ಅಲ್ಪಸಂಖ್ಯಾತರನ್ನು ಓಲೈಸಲು ಪ್ರಯತ್ನಿಸಿದರು. ಶೈಕ್ಷಣಿಕ ಸುಧಾರಣೆಯ ಅಜೆಂಡಾವು ಕೋಮುವಾದ ಆಗಿರಬಾರದು ಎಂದು ಜೋಷಿ ಒತ್ತಾಯಿಸಿದರು.

ಶಿಕ್ಷಣದ ಸುಧಾರಣೆಯು ಕೇವಲ ರಾಜಕೀಯ ಲಾಭದ ಉದ್ದೇಶ ಹೊಂದಿದ್ದರೆ ಎಲ್ಲ ಪ್ರಯತ್ನಗಳು ವ್ಯರ್ಥವಾಗುತ್ತವೆ ಎಂದ ಅವರು, ಯಶಪಾಲ್ ಸಮಿತಿಯ ಶಿಫಾರಸುಗಳನ್ನು ಅಳವಡಿಸಲು ಆತುರ ಬೇಡ, ಯಾಕೆಂದರೆ ಅದನ್ನು ಕೂಡ ಆತುರಾತುರವಾಗಿಯೇ ಸಿದ್ಧಪಡಿಸಲಾಗಿದೆ ಎಂಬುದು ಮೇಲ್ನೋಟಕ್ಕೆ ತಿಳಿದುಬರುತ್ತದೆ ಎಂದು ಸರಕಾರಕ್ಕೆ ಕೇಳಿಕೊಂಡರು.

ಶಿಕ್ಷಣ ಸುಧಾರಣೆ ಕುರಿತಾಗಿ ಕೊಠಾರಿ ಸಮಿತಿಯು ವರದಿ ಸಲ್ಲಿಸಿ ನಾಲ್ಕು ದಶಕಗಳೇ ಸಂದರೂ, ಅದರಲ್ಲಿನ ಶಿಫಾರಸುಗಳನ್ನು ಪರಿಗಣಿಸುವ ಗೋಜಿಗೆ ಯಾವುದೇ ಸರಕಾರಗಳೂ ಹೋಗಲಿಲ್ಲ ಎಂದು ವಿಷಾದಿಸಿದ ಅವರು, ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೇ ಇರಬೇಕೆಂಬ ವಾದವನ್ನು ಬೆಂಬಲಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವರುಣ್ ಗಾಂಧಿ ವಿರುದ್ಧ ಆರೋಪಪಟ್ಟಿ ಸಲ್ಲಿಕೆ
ಕಳಂಕಿತ ಸೇನಾಸಿಬ್ಬಂದಿಗಳನ್ನು ಕ್ರಿಮಿನಲ್ ಕೋರ್ಟಿನಲ್ಲಿ ವಿಚಾರಣೆ ನಡೆಸಬಹುದು
ಮತ್ತೊಂದು ದಾಳಿ: ಮುಂಬೈಯಲ್ಲಿ ಕಟ್ಟೆಚ್ಚರ
ಬಾಬ್ರಿಫೈಲ್‌: ಸಿಬಿಐ ತನಿಖೆಗೆ ಹೈಕೋ ಆದೇಶ
ಮುಂಬೈಯಲ್ಲಿ ಹೊರಗಿನವರಿಗೆ ಮನೆ ಬೇಡ: ಸೇನೆ ಒತ್ತಾಯ
ಅಜರ್-ಸಿಧು: ಟೀಮ್ ಮೇಟ್‌ಗಳೀಗ ಎದುರಾಳಿಗಳು