ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮಾಯಾಮಾಯೆ: ಯುಪಿಸಿಸಿ ಅಧ್ಯಕ್ಷೆ ರೀಟಾ ಬಂಧನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾಯಾಮಾಯೆ: ಯುಪಿಸಿಸಿ ಅಧ್ಯಕ್ಷೆ ರೀಟಾ ಬಂಧನ
ಉತ್ತರಪ್ರದೇಶ ಮುಖ್ಯಮಂತ್ರಿ ಮಾಯಾವತಿ ಅವರ ವಿರುದ್ಧ ಅವಮಾನಕಾರಿ ಹೇಳಿಕೆ ನೀಡಿದ್ದಾರೆಂಬ ಆರೋಪದಲ್ಲಿ ಉತ್ತರಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ರೀಟಾ ಬಹುಗುಣ ಜೋಷಿ ಅವರನ್ನು ಇಲ್ಲಿ ಗುರುವಾರ ಬಂಧಿಸಲಾಗಿದೆ.

ಬಂಧನಕ್ಕೀಡಾಗಿರುವ ಜೋಷಿ ಅವರನ್ನು ನ್ಯಾಯಾಧೀಶ ಪ್ರಶಾಂತ್ ಕುಮಾರ್ ಎದುರು ಹಾಜರು ಪಡಿಸಲಾಗಿದ್ದು, ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಇಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ರೀಟಾ ಅವರು ಮಾಯಾವತಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ಆರೋಪಿಸಲಾಗಿದೆ. ಇವರು ಬುಧವಾರ ರಾತ್ರಿ ದೆಹಲಿಗೆ ತೆರಳುತ್ತಿದ್ದ ವೇಳೆ ಗಜಿಯಾಬಾದ್‌ನಲ್ಲಿ ಬಂಧಿಸಲಾಗಿದೆ.

"ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷೆನ್ 153ಎ(ಉದ್ರೇಕಕಾಗಿ ಭಾಷಣ) ಮತ್ತು ಸೆಕ್ಷನ್ 109 (ನಿಂದನಾ ಭಾಷೆಯ ಬಳಕೆ) ಹಾಗೂ ಪರಿಶಿಷ್ಟ ಜಾತಿ/ಪಂಗಡ ದೌರ್ಜನ್ಯ ತಡೆ ಕಾಯ್ದೆಗಳನ್ವಯ ಪ್ರಕರಣ ದಾಖಲಿಸಲಾಗಿದೆ" ಎಂದು ಎಡಿಜಿಪಿ ಬ್ರಿಜ್ ಲಾಲ್ ಹೇಳಿದ್ದಾರೆ.

ರೀಟಾ ಮನೆಗೆ ಬೆಂಕಿ
ಅತ್ಯಂತ ಭದ್ರತಾ ವಲಯದಲ್ಲಿನ, ಸಚಿವಾಲಯಕ್ಕೆ ಸನಿಹವಾಗಿರುವ ರೀಟಾ ಅವರ ನಿವಾಸದ ಮೇಲೆ ಬುಧವಾರ ರಾತ್ರಿ ಶಂಕಿತ ಬಿಎಸ್ಪಿ ಕಾರ್ಯಕರ್ತರು ದಾಳಿ ನಡೆಸಿ ಬೆಂಕಿ ಹಚ್ಚಿದ್ದಾರೆ.

ಮನೆಯ ಒಂದು ಭಾಗ ಬೆಂಕಿಯಿಂದ ಸುಟ್ಟುಹೋಗಿದೆ. ಅಲ್ಲದೆ ಅಲ್ಲಿ ನಿಲ್ಲಿಸಲಾಗಿದ್ದ ವಾಹನಗಳಿಗೆ ಹಾನಿಯಾಗಿದೆ. ಯಾವದೇ ಸಾವು ನೋವು ಸಂಭವಿಸಿಲ್ಲ ಎಂದು ಅವರು ತಿಳಿಸಿದ್ದಾರೆ.

ಬೆಂಕಿಯನ್ನು ನಂದಿಸಲಾಗಿದ್ದು, ರೀಟಾ ನಿವಾಸದ ಸುತ್ತ ಪೊಲೀಸರನ್ನು ನಿಯೋಜಿಸಲಾಗಿದೆ. ಮತ್ತು ಅವರ ಅಲಹಾಬಾದ್ ನಿವಾಸಕ್ಕೂ ಭದ್ರತೆ ಒದಗಿಸಲಾಗಿದೆ ಎಂದು ಬ್ರಿಜ್‌ಲಾಲ್ ತಿಳಿಸಿದ್ದಾರೆ.

ರೀಟಾ ಏನು ಹೇಳಿದ್ದರು?
ಮೊರಾದಾಬಾದಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ರೀಟಾ ಅವರು ಮಾಯಾ ಸರ್ಕಾರದ ಕಾರ್ಯಶೈಲಿಯನ್ನು ಟೀಕಿಸುತ್ತಾ, ಅತ್ಯಾಚಾರ ಬಲಿಪಶುಗಳು ಸೇರಿದಂತೆ ಅಪರಾಧ ಕೃತ್ಯಗಳಿಗೆ ಬಲಿಯಾದವರನ್ನು ಭೇಟಿಯಾಗಲು ಡಿಜಿಪಿಯವರನ್ನು ಕಳುಹಿಸಿ 25 ಸಾವಿರ ಪರಿಹಾರ ನೀಡುವ ಸರ್ಕಾರದ ಕ್ರಮವನ್ನು ಅವರು ಖಂಡಿಸಿದ್ದರು. ಈ ವೇಳೆ "ಒಂದು ಹೆಣ್ಣಿನ ಶೀಲಕ್ಕೆ ಸರಕಾರ ಬೆಲೆ ಕಟ್ಟುತ್ತಿದೆ. ಇದೇ ರೀತಿ ಮುಖ್ಯಮಂತ್ರಿ ಮಾಯಾವತಿಗೇನಾದರೂ ಆದರೆ, ನಾವು ಒಂದು ಕೋಟಿ ರುಪಾಯಿ ಪರಿಹಾರ ನೀಡಲು ಸಿದ್ಧ" ಎಂಬ ವಿವಾದಕಾರಿ ಹೇಳಿಕೆಯನ್ನು ರೀಟಾ ಜೋಶಿ ನೀಡಿದ್ದರು.

ವಿಷಾದ
ಬಂಧನದ ಬಳಿಕ ಪ್ರತಿಕ್ರಿಯಿಸಿರುವ ರೀಟಾ "ನಾನು ಮಹಿಳಾ ಚಳುವಳಿಯ ಉತ್ಪನ್ನ. ಮಹಿಳೆಯರ ಬಗ್ಗೆ ನನ್ನಲ್ಲಿ ಗೌರವವಿವೆ. ಹೆಲಿಕಾಫ್ಟರಿನಲ್ಲಿ ಪ್ರಯಾಣಿಸಿದ ಡಿಜಿಪಿ ಬಲಿಪಶುಗಳಿಗೆ 25,000 ರೂಪಾಯಿ ಪರಿಹಾರ ನೀಡುವ ಕ್ರಮ ನಾಚಿಕೆಗೇಡಿನದ್ದು" ಎಂದು ಪುನರುಚ್ಚರಿಸಿದ್ದಾರೆ.

ನನ್ನ ಹೇಳಿಕೆ ಮುಖ್ಯಮಂತ್ರಿಗಳಿಗೆ ನೋವುಂಟುಮಾಡಿದ್ದಲ್ಲಿ ತಾನು ತೀವ್ರ ವಿಷಾದ ಪಡಿಸುತ್ತೇನೆ ಎಂದು ರೀಟಾ ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಾಹುಲ್ ದನಿಎತ್ತಲಿ
ಲೋಕಸಭೆಯಲ್ಲಿ ಹಿಂದಿ-ಇಂಗ್ಲೀಷ್ ಜುಗಲ್ಬಂದಿ
ಉಗ್ರರನ್ನು ಬೆಂಬಲಿಸುವ ರಾಷ್ಟ್ರಗಳ ವಿಚಾರಣೆ ನಡೆಸ್ಬೇಕು:ಸಿಂಗ್
ಶಿಕ್ಷಣದಿಂದ ಕೋಮು ಓಲೈಕೆ, ರಾಜಕೀಯ ದೂರವಿಡಿ: ಬಿಜೆಪಿ
ದ್ವೇಷ ಭಾಷಣ: ವರುಣ್ ಗಾಂಧಿ ವಿರುದ್ಧ ಚಾರ್ಜ್‌ಶೀಟ್
ಕಳಂಕಿತ ಸೇನಾಸಿಬ್ಬಂದಿಗಳನ್ನು ಕ್ರಿಮಿನಲ್ ಕೋರ್ಟಿನಲ್ಲಿ ವಿಚಾರಣೆ ನಡೆಸಬಹುದು