ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಉತ್ತರಾಖಂಡದ ರಾಜ್ಯಪಾಲರಾಗಿ ಮಾರ್ಗರೆಟ್ ಆಳ್ವ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉತ್ತರಾಖಂಡದ ರಾಜ್ಯಪಾಲರಾಗಿ ಮಾರ್ಗರೆಟ್ ಆಳ್ವ
PTI
ಉತ್ತರಾಖಂಡ ರಾಜ್ಯಪಾಲ ಬಿ.ಎಲ್.ಜೋಶಿ ಅವರನ್ನು ಉತ್ತರಪ್ರದೇಶ ರಾಜ್ಯಪಾಲರನ್ನಾಗಿ ಶನಿವಾರ ವರ್ಗಾಯಿಸಿರುವ ಹಿನ್ನೆಲೆಯಲ್ಲಿ ಆ ಸ್ಥಾನಕ್ಕೆ ಕೇಂದ್ರ ಮಾಜಿ ಸಚಿವೆ, ಕನ್ನಡತಿ ಮಾರ್ಗರೆಟ್ ಆಳ್ವ ಅವರನ್ನು ಉತ್ತರಾಖಂಡದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ ಎಂದು ರಾಷ್ಟ್ರಪತಿ ಭವನದ ಮೂಲಗಳು ತಿಳಿಸಿವೆ.

ಆ ರಾಜ್ಯದ ಪ್ರಥಮ ಮಹಿಳಾ ರಾಜ್ಯಪಾಲರು ಎಂಬ ಹೆಗ್ಗಳಿಕೆ ಆಳ್ವ ಅವರ ಪಾಲಾಗಿದೆ. ರಾಜೀವ್ ಗಾಂಧಿ ಹಾಗೂ ಪಿ.ವಿ.ನರಸಿಂಹ್ ರಾವ್ ಸರ್ಕಾರದಲ್ಲಿ ಸಚಿವರಾಗಿ ದುಡಿದ ಅನುಭವ ಮಾರ್ಗರೆಟ್ ಆಳ್ವ ಅವರಿಗಿದೆ.

ಇದಲ್ಲದೆ, ರಾಜಸ್ಥಾನ ಮಾಜಿ ಮುಖ್ಯಮಂತ್ರಿ ಜಗನ್ನಾಥ್ ಪಹಾಡಿಯಾ ಅವರನ್ನು ಹರ್ಯಾಣ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಬಿ.ಎಲ್.ಜೋಶಿ ಅವರನ್ನು ಉತ್ತರಾಖಂಡದಿಂದ ಉತ್ತರ ಪ್ರದೇಶಕ್ಕೆ ವರ್ಗಾಯಿಸಲಾಗಿದೆ.

ಜಾರ್ಖಂಡ್ ರಾಜ್ಯಪಾಲ ಸೈಯದ್ ಸಿಬ್ತೆ ರಜಿ ಅವರನ್ನು ಅಸ್ಸಾಂಗೆ, ನಾಗಾಲ್ಯಾಂಡ್‌ನಲ್ಲಿದ್ದ ಕೆ.ಶಂಕರನಾರಾಯಣ ಅವರನ್ನು ರಾಂಚಿಗೆ ಕಳುಹಿಸಲಾಗಿದೆ. ಕಾಂಗ್ರೆಸ್ ನಾಯಕ ಇಕ್ಬಾಲ್ ಸಿಂಗ್ ಅವರನ್ನು ಪುದುಚೇರಿಯ ಲೆ.ಗವರ್ನರ್ ಆಗಿ ನೇಮಿಸಲಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಾಜ್ಯಸಭೆಯತ್ತ ದೃಷ್ಟಿ ನೆಟ್ಟ ದೇಶ್‌ಮುಖ್, ಆದಿಕ್
ರೀಟಾ ಬಹುಗುಣ ಜೋಶಿಗೆ ಮಧ್ಯಂತರ ಜಾಮೀನು
ರೀಟಾ ಮನೆಗೆ ಬೆಂಕಿ: ಬಿಸ್ಪಿ ಶಾಸಕ ವಿರುದ್ದ ಎಫ್ಐಆರ್
ಕೊಚ್ಚಿಯಲ್ಲಿ ದೇಶದ ಅತೀ ಉದ್ದದ ರೈಲ್ವೇ ಸೇತುವೆ
ಭಾರತ-ಪಾಕ್ ಮಾತುಕತೆಗೆ ಒತ್ತಡ ಇಲ್ಲ: ಹಿಲರಿ
ಶಾಲೆಯಲ್ಲಿ ಆನೆಗಳಿಗೆ ಮಧ್ಯಾಹ್ನದೂಟ!