ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮಾಯಾ ಸರ್ಕಾರದಿಂದ ನ್ಯಾಯ ಸಿಗುವ ಭರವಸೆ ಇಲ್ಲ: ಜೋಶಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾಯಾ ಸರ್ಕಾರದಿಂದ ನ್ಯಾಯ ಸಿಗುವ ಭರವಸೆ ಇಲ್ಲ: ಜೋಶಿ
ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ರೀಟಾ ಬಹುಗುಣ ಜೋಶಿ, ತಮ್ಮ ನಿವಾಸಕ್ಕೆ ಬೆಂಕಿ ಹಚ್ಚಿದ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ಒಪ್ಪಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಘಟನೆಯನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿದ್ದಾರೆ.

'ನನ್ನ ಮನೆಗೆ ಬೆಂಕಿ ಹಚ್ಚಿದ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ತಾನು ಆಗ್ರಹಿಸುತ್ತೇನೆ. ಇದು ನಮ್ಮ ಪಕ್ಷದ ಒತ್ತಾಯವೂ ಆಗಿದೆ'ಎಂದು ಈ ಸಂದರ್ಭದಲ್ಲಿ ಹೇಳಿದರು. ಉತ್ತರಪ್ರದೇಶದಲ್ಲಿ ಪ್ರಜಾಪ್ರಭುತ್ವ ಸಂಪೂರ್ಣ ಕುಸಿದಿದೆ. ನನ್ನ ಮನೆಗೆ ಬೆಂಕಿ ಹಚ್ಚಿರುವ ಪ್ರಕರಣದ ಹಿಂದೆ ಮಾಯಾ ಸರ್ಕಾರದ ಕುಮ್ಮಕ್ಕಿದೆ ಎಂದು ಮತ್ತೊಮ್ಮೆ ಗಂಭೀರವಾಗಿ ಆರೋಪಿಸಿದರು.

ಮನೆಗೆ ಬೆಂಕಿ ಹಚ್ಚಿದ ಪ್ರಕರಣದ ಹಿಂದೆ ನಿಜಕ್ಕೂ ಉತ್ತರಪ್ರದೇಶ ಸರ್ಕಾರದ ಕೈವಾಡವಿದೆ. ಇದು ಮಾಯಾವತಿ ಅವರ ನಿರ್ದೇಶನದಂತೆಯೇ ನಡೆದಿದೆ ಎಂದ ರೀಟಾ, ಯುಪಿ ಸರ್ಕಾರದ ಮೇಲೆ ತನಗೆ ವಿಶ್ವಾಸ ಇಲ್ಲ ಎಂದು ಹೇಳಿದರು.

ಜುಲೈ 15ರಂದು ಯುಪಿಸಿಸಿ ಅಧ್ಯಕ್ಷೆ ರೀಟಾ ಬಹುಗುಣ ಜೋಶಿಯವರು ಮುಖ್ಯಮಂತ್ರಿ ಮಾಯಾವತಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಬಂಧಿತರಾಗಿದ್ದರು. ಅದೇ ವೇಳೆಯಲ್ಲಿ ಮಾಯಾ ಪಕ್ಷಕ್ಕೆ ಸೇರಿದವರೆನ್ನಲಾದ ದುಷ್ಕರ್ಮಿಗಳು ಜೋಶಿ ನಿವಾಸಕ್ಕೆ ನುಗ್ಗಿ ದಾಂಧಲೆ ನಡೆಸಿ ಬೆಂಕಿ ಹಚ್ಚಿದ್ದರು.ನಂತರ ರೀಟಾ ಅವರಿಗೆ ಜುಲೈ 29ರವರೆಗೆ ಕೋರ್ಟ್ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಕ್ಷರಧಾಮ ದಾಳಿ; ಶಂಕಿತ ಉಗ್ರನ ಬಂಧನ
ನವದೆಹಲಿಗೆ ಹಿಲರಿ ಭೇಟಿ:ಬಿಗಿ ಬಂದೋಬಸ್ತ್
ಅಡ್ವಾಣಿ,ಮೋದಿಗೆ ನಕ್ಸಲ್ ಬೆದರಿಕೆ;ಭದ್ರತೆಗೆ ಒತ್ತಾಯ
ಉತ್ತರಾಖಂಡದ ರಾಜ್ಯಪಾಲರಾಗಿ ಮಾರ್ಗರೆಟ್ ಆಳ್ವ
ರಾಜ್ಯಸಭೆಯತ್ತ ದೃಷ್ಟಿ ನೆಟ್ಟ ದೇಶ್‌ಮುಖ್, ಆದಿಕ್
ರೀಟಾ ಬಹುಗುಣ ಜೋಶಿಗೆ ಮಧ್ಯಂತರ ಜಾಮೀನು