ಚಂಡೀಗಢ: ಪಂಜಾಬಿನ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದ್ದು ಮತದಾನ ನಡೆಯುತ್ತಿದೆ. ಸೋಮವಾರದ ಚುನಾವಣೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖ್ಬೀರ್ ಸಿಂಗ್ ಅವರೂ ಕಣದಲ್ಲಿದ್ದಾರೆ.
ಫಿರೋಜ್ಪುರ ಜಿಲ್ಲೆಯ ಜಲಾಲಬಾದ್ ಸ್ಥಾನದಿಂಗ ಸುಖ್ಬೀರ್ ಸಿಂಗ್ ಸ್ಫರ್ಧಿಸುತ್ತಿದ್ದಾರೆ. ಇವರು ಆರು ತಿಂಗಳೊಳಗೆ ರಾಜ್ಯ ಶಾಸನ ಸಭೆಯ ಸ್ಥಾನಪಡೆಯಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಕಳೆದ ತಿಂಗಳ ತನ್ನ ಉಪಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಬೇಕಾಯಿತು.
ಮೂರು ಸ್ಥಾನಗಳಿಗೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಒಟ್ಟು 21 ಅಭ್ಯರ್ಥಿಗಳು ಸ್ಫರ್ಧಿಸುತ್ತಿದ್ದಾರೆ. ಆಡಳಿತಾರೂಢ ಎಸ್ಎಡಿ ಹಾಗೂ ಕಾಂಗ್ರೆಸ್ ನಡುವೆ ನೇರ ಸ್ಫರ್ಧೆ ನಡೆಯುತ್ತಿದೆ. ಅಕಾಲಿದಳವು ಲ್ಲಾ ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇದು ಅಕಾಲಿ ದಳ ಹಾಗೂ ಬಿಜೆಪಿ ಮೈತ್ರಿಯ ಅಳಿವು ಉಳಿವಿನ ಪ್ರಶ್ನೆಯಾಗಿದೆ.