ಗುಜ್ರಾತ್ನಲ್ಲಿ ರಾಷ್ಟ್ರಪತಿ ಆಡಳಿತ ಹೇರಲ್ಲ: ಕಾಂಗ್ರೆಸ್
ಗಾಂಧಿನಗರ, ಮಂಗಳವಾರ, 4 ಆಗಸ್ಟ್ 2009( 09:05 IST )
PTI
ಗೋಧ್ರೋತ್ತರ ನರಮೇಧ ಪ್ರಕರಣದಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಸಂಪುಟದ ಕೆಲ ಸಚಿವರು ತಪ್ಪಿತಸ್ಥರು ಎಂದು ಸಾಬೀತಾದರೂ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರುವ ಸಾಧ್ಯತೆಗಳಿಲ್ಲ ಎಂದು ಕಾಂಗ್ರೆಸ್ ಹೇಳಿದೆ.
ಸುಪ್ರೀಂಕೋರ್ಟ್ ನೇಮಿಸಿರುವ ವಿಶೇಷ ತನಿಖಾ ತಂಡ ಈ ಕುರಿತು ತನಿಖೆ ನಡೆಸುತ್ತಿದೆ. ಅದು ವರದಿ ಸಲ್ಲಿಸಲು ಈ ವರ್ಷದ ಡಿ.31ರವರೆಗೆ ಅವಕಾಶವಿದೆ.
ವರದಿ ಸಲ್ಲಿಸಿದ ನಂತರ ಸುಪ್ರೀಂಕೋರ್ಟ್ ಏನು ತೀರ್ಪು ನೀಡುತ್ತದೆ ಎಂಬುದರ ಮೇಲೆ ಮೋದಿ ಭವಿಷ್ಯ ನಿರ್ಧಾರವಾಗಲಿದೆ. ಆದರೆ. ಮೋದಿ ತಪ್ಪಿತಸ್ಥ ಎಂದು ತೀರ್ಪು ಹೊರಬಿದ್ದ ಪಕ್ಷದಲ್ಲಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವುದರ ಬದಲು ಸರ್ಕಾರವನ್ನು ವಜಾಗೊಳಿಸಿ ಹೊಸ ಸರ್ಕಾರ ರಚನೆಗೆ ಸೂಚಿಸಲು ಕೇಂದ್ರ ಸರ್ಕಾರ ಒಲವು ಹೊಂದಿದೆ ಎಂದು ಕಾಂಗ್ರೆಸ್ ನಾಯಕ ಶಂಕರ್ ಸಿಂಗ್ ವಾಘೇಲಾ ಸೋಮವಾರ ತಿಳಿಸಿದ್ದರು.