ಸೋಮವಾರ ಸಾಂಯಕಾಲ ಇಲ್ಲಿನ ದೇವಾಲಯ ಒಂದರಲ್ಲಿ ಪ್ರಸಾದ ಸ್ವೀಕರಿಸಿದ ಭಕ್ತರಲ್ಲಿ ನಾಲ್ವರು ಸಾವನ್ನಪ್ಪಿದ್ದು ಇತರ 150ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ದಾರುಣ ಘಟನೆ ಸಂಭವಿಸಿದೆ.
ಪಶ್ಚಿಮ ಬಂಗಾಳದ ಬರ್ದ್ವಾನ್ ಜಿಲ್ಲೆಯಲ್ಲಿನ ದೇವಾಲಯ ಒಂದರಲ್ಲಿ ನೂರಾರು ಮಂದಿ ಭಕ್ತರು ಸೇರಿದ್ದು ಪ್ರಸಾದ ಸೇವಿಸಿದ ಬಳಿಕ ಅವರಿಗೆ ತಲೆತಿರುಗಿದ ಅನುಭವವಾಯಿತು. ತಕ್ಷಣವೇ ಹಲವಾರು ಮಂದಿ ಪ್ರಜ್ಞೆ ಕಳೆದುಕೊಂಡಿದ್ದು, ಅವರನ್ನು ಹತ್ತಿರ ಆಸ್ಪತ್ರೆಗೆ ಸೇರಿಸಲಾಗಿದ್ದು, ಅಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಸುಮಾರು 150 ಮಂದಿ ಅಸ್ವಸ್ಥರಾಗಿದ್ದಾರೆ. ಪ್ರಸಾದದಲ್ಲಿ ವಿಷಯುಕ್ತ ಅಂಶಗಳು ಸೇರಿರುವುದು ಈ ದುರಂತಕ್ಕೆ ಕಾರಣ ಎನ್ನಲಾಗಿದೆ.